ಕಾಂಗ್ರೆಸ್ ಭ್ರಷ್ಟಾಚಾರ ಹುಟ್ಟುಹಾಕಿದ ರಕ್ತಬೀಜಾಸುರ ಪಕ್ಷ: ಪ್ರಲ್ಹಾದ್ ಜೋಶಿ | JANATA NEWS
ದಾವಣಗೆರೆ : ಕಾಂಗ್ರೆಸ್ ಭ್ರಷ್ಟಾಚಾರ ಹುಟ್ಟುಹಾಕಿದ ರಕ್ತಬೀಜಾಸುರ ಪಕ್ಷ. ನೆಹರೂ ಕಾಲದಿಂದ ಮನಮೋಹನ್ ಸಿಂಗ್ ಕಾಲದವರೆಗೂ ಭ್ರಷ್ಟಾಚಾರ ತಾಂಡವವಾಡುತ್ತಿತ್ತು ಎಂದರು.
ನಾವು ಲೋಕಾಯುಕ್ತಕ್ಕೆ ಬಲ ತುಂಬುವ ಕೆಲಸ ಮಾಡಿದ್ದೇವೆ. ನಮ್ಮ ಪಕ್ಷದ ಶಾಸಕರೇ ತಪ್ಪು ಮಾಡಿರುವುದು. ನಾವು ಮನಸ್ಸು ಮಾಡಿದ್ರೆ ಪ್ರಕರಣ ಮುಚ್ಚಿ ಹಾಕಬಹುದಿತ್ತು. ಆದರೆ, ನಾವು ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದೇವೆ. ನಮ್ಮವರನ್ನೇ ಬಿಟ್ಟಿಲ್ಲ ಉಳಿದವರನ್ನು ಬಿಡ್ತಿವಾ ಎಂದಿದ್ದಾರೆ.
ನಮ್ಮವರೇ ಅಲ್ಲ, ಕಾಂಗ್ರೆಸ್, ಜೆಡಿಎಸ್ನವರು ತಪ್ಪು ಮಾಡಿದ್ರೂ ಬಿಡಲ್ಲ. ರಾಜ್ಯದಲ್ಲಿ ಲೋಕಾಯುಕ್ತಕ್ಕೆ ಬೀಗ ಹಾಕಿದ್ದು ಕಾಂಗ್ರೆಸ್ ಆಗಿದೆ. ಲೋಕಾಯುಕ್ತ ಬೇಡವೆಂದು ಸುಪ್ರೀಂಗೆ ಮೇಲ್ಮನವಿ ಹೋಗಿ ಅಂದಿದ್ದರು. ನಾವು ಲೋಕಾಯುಕ್ತ ವಿರುದ್ಧ ಸುಪ್ರೀಂಗೆ ಹೋಗಲಿಲ್ಲ. ಸುಪ್ರೀಂಗೆ ಹೋಗುವ ಬದಲು ಲೋಕಾಯುಕ್ತಕ್ಕೆ ಬಲ ತುಂಬುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನು ಯಾಕೆ ಬಂದ್ ಮಾಡಿತ್ತು. ಹಲ್ಲಿಲ್ಲದ ಹುಲಿ ಮಾಡಿ, ಎಸಿಬಿಗೂ ಪವರ್ ಇಲ್ಲದಂತೆ ಮಾಡಿದರು. ನಾವು ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ಸಿಎಂ, ಸರ್ಕಾರ ತಡೆಯಬಹುದಿತ್ತು, ಆದರೆ, ನಾವು ತಡೆಯಲಿಲ್ಲ. ಬಿಜೆಪಿ ಭ್ರಷ್ಟಾಚಾರದ ವಿರುದ್ಧವಾಗಿದೆ, ಅದಕ್ಕೆ ಲೋಕಾಯುಕ್ತ ಬಲ ಮಾಡಿದ್ದೇವೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು, ಯಾರನ್ನೂ ಉಳಿಸುವ ಕೆಲಸ ಮಾಡುವುದಿಲ್ಲ ಎಂದು ಜೋಶಿ ಹೇಳಿದರು.