ಬ್ರಿಟಿಷ್ ಹೈಕಮಿಷನ್ ಕಛೇರಿಗೆ, ನಿವಾಸಕ್ಕೆ ಭದ್ರತೆ ರದ್ದು : ತಕ್ಕಪಾಠ ಕಲಿಸಿದ ಭಾರತ | JANATA NEWS
ನವದೆಹಲಿ : ಭಾರತವು ಬ್ರಿಟಿಷ್ ಹೈಕಮಿಷನ್ ಮತ್ತು ಹೈಕಮಿಷನರ್ ನಿವಾಸದ ಹೊರಗಡೆ ನೀಡಲಾಗಿದ್ದ ಎಲ್ಲಾ ಭದ್ರತೆಯನ್ನು ತೆಗೆದುಹಾಕಿದೆ. ಲಂಡನ್ನಲ್ಲಿರುವ ಭಾರತೀಯ ಆಯೋಗವನ್ನು ಖಲಿಸ್ತಾನಿ ಉಗ್ರರು ಧ್ವಂಸಗೊಳಿಸಿದ ನಂತರ ಈ ಕ್ರಮಗಳು ಬೆಳಕಿಗೆ ಬಂದಿವೆ.
ಭಾರತದ ನವದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಮತ್ತು ಹೈ ಕಮಿಷನರ್ ನಿವಾಸದ ಹೊರಗೆ ಭದ್ರತಾ ಬ್ಯಾರಿಕೇಡ್ಗಳು ಮತ್ತು ಭದ್ರತಾ ವಾಹನಗಳನ್ನು ತೆಗೆದುಹಾಕಲಾಗಿದೆ.
ಈ ಕ್ರಮವನ್ನು ಯುಕೆ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನಲ್ಲಿನ ಭದ್ರತೆಯ ಕೊರತೆಯ ಪ್ರತಿಕ್ರಿಯೆಯಾಗಿ ಪರಿಗಣಿಸಬಹುದಾಗಿದೆ, ಅಲ್ಲಿ ಭಾರತದ ಧ್ವಜವನ್ನು ಖಾಲಿಸ್ತಾನಿ ಗೂಂಡಾಗಳು ಕೆಳಗಿಳಿಸಿದ್ದರು. ಭಾನುವಾರದಂದು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗುತ್ತಿದ್ದ ತೀವ್ರಗಾಮಿ ಗೂಂಡಾಗಳ ಗುಂಪೊಂದು ಲಂಡನ್ನಲ್ಲಿರುವ ಕಾನ್ಸುಲೇಟ್ ಅನ್ನು ಧ್ವಂಸಗೊಳಿಸಿತ್ತು.
ಭದ್ರತೆಯನ್ನು ಕಡಿತ ಮಾಡುವ ಸಾಧ್ಯತೆಯ ಕುರಿತು ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆಯಿಲ್ಲದಿದ್ದರೂ, ಕಂಡುಬರುವ ಭದ್ರತೆಯ ಕೊರತೆ, ತೆರವುಗೊಳಿಸಲಾದ ಭದ್ರತಾ ವಾಹನಗಳು ಮತ್ತು ಬ್ಯಾರಿಕೇಡ್ ಗಳು ಬುಧವಾರದಂದು ಭಾರತ ಸರ್ಕಾರದ ಕ್ರಮಕ್ಕೆ ಪುರಾವೆ ನೀಡುವಂತಿದೆ.
ಏತನ್ಮಧ್ಯೆ, "ನಾವು ಭದ್ರತಾ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ" ಎಂದು ಬ್ರಿಟಿಷ್ ಹೈ ಕಮಿಷನ್ ವಕ್ತಾರರು ಹೇಳಿದ್ದಾರೆ.
ಲಂಡನ್ನಲ್ಲಿರುವ ಭಾರತೀಯ ದೂತಾವಾಸದ ಮೇಲೆ ನಡೆದ ದಾಳಿಯ ನಂತರ, ಭಾರತ ಸರ್ಕಾರವು ಬ್ರಿಟಿಷ್ ಹೈಕಮಿಷನ್ನಲ್ಲಿ ಅತ್ಯಂತ ಹಿರಿಯ ರಾಜತಾಂತ್ರಿಕರನ್ನು ಕರೆಸುವ ಮೂಲಕ ಪ್ರತಿಭಟನೆಯನ್ನು ಸಲ್ಲಿಸಿತ್ತು. ದಾಳಿಕೊರರು ಹೈಕಮಿಷನ್ ಆವರಣಕ್ಕೆ ಪ್ರವೇಶಿಸಲು ಅನುಮತಿಸಿದ ಬ್ರಿಟಿಷ್ ಭದ್ರತೆಯ ಸಂಪೂರ್ಣ ಅನುಪಸ್ಥಿತಿಯ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ವಿವರಣೆಯನ್ನು ಕೋರಿತ್ತು.