ದಿ ಕೇರಳ ಸ್ಟೋರಿ ಸಿನಿಮಾ ವಿಚಾರವಾಗಿ ಪ್ರಧಾನಿ ಮೋದಿ ಮಾತನಾಡಿದ್ದೇಕೆ? | JANATA NEWS
ಬಳ್ಳಾರಿ : ಕೇರಳ ರಾಜ್ಯದಲ್ಲಿನ ಧಾರ್ಮಿಕ ಮತಾಂತರಗಳನ್ನು ಆಧರಿಸಿದ ‘ದಿ ಕೇರಳ ಸ್ಟೋರಿ’ ಚಲನಚಿತ್ರವು ಭಯೋತ್ಪಾದನಾ ಸಂಘಟನೆಯ ನೈಜತೆ ಮತ್ತು ಅವರ ತಂತ್ರಗಳನ್ನು ಬಹಿರಂಗಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ದಿ ಕೇರಳ ಸ್ಟೋರಿ ಆತಂಕವಾದದ ಕಥಾವಸ್ತುವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಹಲವು ವರ್ಷಗಳಿಂದ ಆತಂಕವಾದದ ಸ್ವರೂಪ ಬದಲಾಗಿದೆ’ ಎಂದಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ, ಭಯೋತ್ಪಾದನೆಯ ಮತ್ತೊಂದು ರೂಪವು ಮುನ್ನೆಲೆಗೆ ಬಂದಿದೆ. ಬಾಂಬ್ ಮತ್ತು ಬಂದೂಕುಗಳು ಸದ್ದು ಮಾಡುತ್ತವೆ ಮತ್ತು ಅದು ಕೇಳುತ್ತದೆ. ಆದರೆ ಸಮಾಜದೊಳಗಿನ ಜನರು ಭಯೋತ್ಪಾದನೆಗೆ ಸೇರಿದರೆ ಯಾವುದೇ ಶಬ್ದವಿಲ್ಲರುವುದಿಲ್ಲ. ಇಂತಹ ಭಯೋತ್ಪಾದನೆಯ ಬಗ್ಗೆ ನ್ಯಾಯಾಲಯಗಳೂ ಕಳವಳ ವ್ಯಕ್ತಪಡಿಸಿವೆ' ಎಂದು ಮೋದಿ ವಾಗ್ದಾಳಿ ನಡೆಸಿದರು
‘ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಆತಂಕವಾದದ ಮತ್ತೊಂದು ಮುಖವನ್ನು ಪರಿಚಯಿಸಲಾಗಿದೆ. ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಆದರೆ, ಕಾಂಗ್ರೆಸ್ ಪಕ್ಷ ಈ ಕುರಿತು ಮಾತನಾಡದೇ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಆತಂಕವಾದದ ಪರವಾಗಿಯೇ ಮಾತನಾಡುತ್ತಿದೆ’ ಎಂದರು.
ಇದೊಂದು ಸುಂದರ ರಾಜ್ಯವಾಗಿದ್ದು, ಜನರು ತುಂಬಾ ಶ್ರಮವಹಿಸಿ ದುಡಿಯುತ್ತಿದ್ದಾರೆ ಮತ್ತು ಕೌಶಲ್ಯಪೂರ್ಣರಾಗಿದ್ದಾರೆ. ಇಂತಹ ರಾಜ್ಯದಲ್ಲಿ ಭಯೋತ್ಪಾದಕರ ಪಿತೂರಿಯನ್ನು 'ದಿ ಕೇರಳ ಸ್ಟೋರಿ'ಯಲ್ಲಿ ತೋರಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.