ಜನರಿಗೆ ಬೇಕಾಗಿರುವುದು ಅಕ್ಕಿಯೇ ಹೊರತು ಹಣವಲ್ಲ, ಸಿಟಿ ರವಿ ವಿರುದ್ಧ ಜಾರ್ಜ್ ವಾಗ್ದಾಳಿ | JANATA NEWS
ಚಿಕ್ಕಮಗಳೂರು : ಜನರಿಗೆ ಬೇಕಾಗಿರುವುದು ಅಕ್ಕಿಯೇ ಹೊರತು ಹಣವಲ್ಲ ಎಂಬುದನ್ನು ಸಿ.ಟಿ. ರವಿ ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿರುಗೇಟು ನೀಡಿದ್ದಾರೆ.
ನಾವು ಅಕ್ಕಿಯನ್ನು ಉಚಿತವಾಗಿ ಕೇಳುತ್ತಿಲ್ಲ. ಅದಕ್ಕೆ ಖರ್ಚಾಗುವ ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದೇವೆ. FCIನವರು ಮೊದಲಿಗೆ ನಮ್ಮ ಬಳಿ ಅಕ್ಕಿ ಸ್ಟಾಕ್ ಇದೆ ಕೊಡುತ್ತೇವೆ ಎಂದು ಹೇಳಿದ್ದರು. ಆ ನಂತರ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಿ ಹೇಳಿ ಉಲ್ಟಾ ಹೊಡೆದಿದ್ದಾರೆ. ನೀವು ಅಕ್ಕಿಯನ್ನು ಜನರಿಗೆ ಕೊಡದೆ ಕೊಳೆಸಲು ಮುಂದಾಗಿರುವುದು ದ್ವೇಷ ರಾಜಕಾರಣ ಅಲ್ಲದೇ ಇನ್ನೇನು ಎಂದು ಪ್ರಶ್ನಿಸಿದ್ದಾರೆ.
ಪಾಪ ಸಿ.ಟಿ ರವಿ ಒಬ್ಬ ಪಾರ್ಟಿ ಮ್ಯಾನ್. ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಅವರಿಗೆ ಇದೆಲ್ಲಾ ಹೇಗೆ ಗೊತ್ತಾಗುತ್ತದೆ. ಅಕ್ಕಿ ಇರುವುದೇ ಬಡವರಿಗೆ ಕೊಡುವುದಕ್ಕೆ. ದುಡ್ಡು ಕೊಡಿ ಎಂದರೆ ಹೇಗೆ? ಜನರಿಗೆ ಬೇಕಾಗಿರುವುದು ಅಕ್ಕಿ, ದುಡ್ಡಲ್ಲ ಎಂದು ವಾಗ್ದಾಳಿ ನಡೆಸಿದರು.