Sun,Mar22,2026
ಕನ್ನಡ / English

ಡಿಸಿ, ಕಮಿಷನರ್, ಸಿಇಒಗಳಿಗೆ ರೇಟ್ ಫಿಕ್ಸ್: ಸರ್ಕಾರದ ವಿರುದ್ಧ ಕಟೀಲ್ ಗಂಭೀರ ಆರೋಪ | JANATA NEWS

11 Jul 2023

ಬೆಳಗಾವಿ : ಜಿಲ್ಲಾಧಿಕಾರಿಗಳು, ಆಯುಕ್ತರು, ಸಿಇಒ, ಎಂಜಿನರ್ ಗಳಿಗೆ ರೇಟ್ ಫಿಕ್ಸ್ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದರು.

ಬೆಳಗಾವಿ ಪೊಲೀಸ್ ಕಮಿಷನರ್ ನೇಮಕವಾಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿಗಳಿಗೆ, ಸಿಇಓಗಳಿಗೆ, ಕಮಿಷನರ್ ಗಳಿಗೆ ರೇಟ್ ಫಿಕ್ಸ್ ಆಗಿದೆ. ರೇಟ್ ಕುದುರುವವರೆಗೂ ಯಾರು ನೇಮಕ ಆಗಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವ ಬದಲು ವರ್ಗಾವಣೆಯಲ್ಲಿ ತೊಡಗಿದೆ. ಐದು ವರ್ಷ ಪೂರ್ಣಗೊಳಿಸುವ ವಿಶ್ವಾಸವಿಲ್ಲ. ಒಂದು ವರ್ಷದಲ್ಲಿ ಎಲ್ಲವನ್ನೂ ದೋಚಲು ಮುಂದಾಗಿದೆ. ಕಾಂಗ್ರೆಸ್ ನ ತಲೆಯಲ್ಲಿ ಮದ, ಮತ್ಸರ, ಅಹಂಕಾರ ಇದೆ. ಜನ ಮತ್ತೆ ಕಾಂಗ್ರೆಸ್ ಗೆ ಬುದ್ದಿ ಕಲಿಸಲಿದ್ದಾರೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ರಾಜ್ಯದ ಜನರಿಗೆ ತೊಂದರೆಯಾದರೆ ನಮ್ಮ ಹೋರಾಟ ನಿರಂತರವಾಗಿ ಇರಲಿದೆ ಎಂದು ಹೇಳಿದರು.

ಜನರ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ, ಲೋಕಸಭೆ ಚುನಾವಣೆ ಈ ರೀತಿ ಮಾಡ್ತಿದ್ದು, 5 ವರ್ಷ ಸರ್ಕಾರ ನಡೆಸುತ್ತೇವೆ ಅಂತಾ ವಿಶ್ವಾಸವಿಲ್ಲ, ಈಗಲೇ ತುಂಬಿಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದಾರೆ.

ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದಾಗ, ಪಾಕಿಸ್ತಾನ ಧ್ವಜ ಹಿಡಿದು ಕುಣಿದಾಡಿದಾಗ ಕೇಸು ಏಕೆ ದಾಖಲಿಸಲಿಲ್ಲ. ಅವರಿಗೆ ಕಾಂಗ್ರೆಸ್ ಬೆಂಗಾವಲಾಗಿದೆಯೇ? ರಾಷ್ಟ್ರ ಪ್ರೇಮಿಗಳ ಪರವಾವಿ ದೂರು ದಾಖಲಿಸುತ್ತಿದ್ದಾರೆ.‌

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಗೂಂಡಾಗಿರಿ, ದರೋಡೆ, ಹಿಂದೂಗಳ ಹತ್ಯೆ, ಮಂಗಳೂರಿನ ಜೈಲಿನಲ್ಲಿ ಡಬಲ್ ಮರ್ಡರ್, ಮೈಸೂರಿನಲ್ಲಿ ಜೈಲಿನಲ್ಲಿ ಕೊಲೆ, ಹೀಗೆ ವಿವಿಧ ಪ್ರಕರಣಗಳು ನಡೆದಿವೆ. ಹೀಗೆ ನಿರಂತರ ಕೊಲೆ, ಸುಲಿಗೆ ನಡೆಯುತ್ತವೆ.‌ ಹಿಂದೆ ಅವರ ಸರ್ಕಾರ ಇದ್ದಾಗ 24ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಯಾವಾಗ ಯಾವಾಗ ಕಾಂಗ್ರೆಸ್ ಸರ್ಕಾರ ಬರುತ್ತೊ ಆಗಾಗ್ಗೆ ಇಂತಹ ಪ್ರಕರಣ ರಾರಾಜಿಸುತ್ತವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಕಿಡಿಕಾರಿದ್ದಾರೆ.

ಜೈನಮುನಿ ಹತ್ಯೆ ಪ್ರಕರಣ ಪಾರದರ್ಶಕವಾಗಿ ನಡೆಯಬೇಕು. ತಪ್ಪಿತಸ್ಥಿಗೆ ಕಠಿಣ ಶಿಕ್ಷೆ ಆಗಬೇಕು. ಬಿಜೆಪಿಯ ಸತ್ಯಶೋಧನ ಸಮಿತಿಯಿಂದ‌ ಜನರಿಂದ‌ ಮಾಹಿತಿ ಪಡೆದುಕೊಂಡು ಅಧ್ಯಯನ ನಡೆಸಲಾಗುವುದು ಎಂದರು.

RELATED TOPICS:
English summary :Rate Fix for DC, Commissioner, CEOs: Kateel Serious Allegation Against Govt

ಹಾರ್ಮುಜ್ ಜಲಸಂಧಿ : ಎಲ್ಲಾ ಭಾರತೀಯ ಹಡಗುಗಳು ಸುರಕ್ಷಿತವಾಗಿವೆ ಮತ್ತು 611 ಹಡಗುಗಳು ಸುರಕ್ಷಿತವಾಗಿವೆ - ಸಚಿವಾಲಯ
ಹಾರ್ಮುಜ್ ಜಲಸಂಧಿ : ಎಲ್ಲಾ ಭಾರತೀಯ ಹಡಗುಗಳು ಸುರಕ್ಷಿತವಾಗಿವೆ ಮತ್ತು 611 ಹಡಗುಗಳು ಸುರಕ್ಷಿತವಾಗಿವೆ - ಸಚಿವಾಲಯ
ಕತಾರ್ ಎಲ್‌ಎನ್‌ಜಿ ದಾಳಿ: ಇರಾನ್‌ಗೆ ಟ್ರಂಪ್ ಎಚ್ಚರಿಕೆ, ಭಾರಿ ಪ್ರತೀಕಾರದ ಬೆದರಿಕೆ
ಕತಾರ್ ಎಲ್‌ಎನ್‌ಜಿ ದಾಳಿ: ಇರಾನ್‌ಗೆ ಟ್ರಂಪ್ ಎಚ್ಚರಿಕೆ, ಭಾರಿ ಪ್ರತೀಕಾರದ ಬೆದರಿಕೆ
ಗುಪ್ತಚರ ಮೌಲ್ಯಮಾಪನದಲ್ಲಿ ಪಾಕಿಸ್ತಾನ ಸಂಭಾವ್ಯ ಪರಮಾಣು ಬೆದರಿಕೆ ಎಂದ ಅಮೆರಿಕ
ಗುಪ್ತಚರ ಮೌಲ್ಯಮಾಪನದಲ್ಲಿ ಪಾಕಿಸ್ತಾನ ಸಂಭಾವ್ಯ ಪರಮಾಣು ಬೆದರಿಕೆ ಎಂದ ಅಮೆರಿಕ
ಕೋಗಿಲುವಿನಲ್ಲಿ ಬಾಂಗ್ಲಾದೇಶಿಗಳಿಗೆ ಭೂಮಿ ಮಂಜೂರು ಮಾಡಲಾಗಿದೆ - ಆರ್ ಅಶೋಕ ಆರೋಪ, ಪ್ರತಿಭಟನೆಗಳ ಎಚ್ಚರಿಕೆ
ಕೋಗಿಲುವಿನಲ್ಲಿ ಬಾಂಗ್ಲಾದೇಶಿಗಳಿಗೆ ಭೂಮಿ ಮಂಜೂರು ಮಾಡಲಾಗಿದೆ - ಆರ್ ಅಶೋಕ ಆರೋಪ, ಪ್ರತಿಭಟನೆಗಳ ಎಚ್ಚರಿಕೆ
ಕಾಬೂಲ್ ಆಸ್ಪತ್ರೆಯ ಮೇಲಿನ ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ಭಾರತ
ಕಾಬೂಲ್ ಆಸ್ಪತ್ರೆಯ ಮೇಲಿನ ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ಭಾರತ
ಸಚಿವರ ಗೈರು, ನಿರಂತರ ನಿರ್ಲಕ್ಷ್ಯದಿಂದ ಬೇಸತ್ತು ಸಭಾತ್ಯಾಗ ಮಾಡಿ ಸದನವನ್ನು ಮುಂದೂಡಿದ ಸ್ಪೀಕರ್ ಖಾದರ್
ಸಚಿವರ ಗೈರು, ನಿರಂತರ ನಿರ್ಲಕ್ಷ್ಯದಿಂದ ಬೇಸತ್ತು ಸಭಾತ್ಯಾಗ ಮಾಡಿ ಸದನವನ್ನು ಮುಂದೂಡಿದ ಸ್ಪೀಕರ್ ಖಾದರ್
ಶಿವಾಲಿಕ್ ಎಲ್‌ಪಿಜಿ ವಾಹಕ ಹಡಗು ಇರಾನ್ ದಾಟಿದ್ದು ಇಂದು ಮುಂಬೈ ತಲುಪಲಿದೆ - ಶಿಪ್ಪಿಂಗ್ ಸಚಿವಾಲಯ, ಭಾರತ ಸರ್ಕಾರ
ಶಿವಾಲಿಕ್ ಎಲ್‌ಪಿಜಿ ವಾಹಕ ಹಡಗು ಇರಾನ್ ದಾಟಿದ್ದು ಇಂದು ಮುಂಬೈ ತಲುಪಲಿದೆ - ಶಿಪ್ಪಿಂಗ್ ಸಚಿವಾಲಯ, ಭಾರತ ಸರ್ಕಾರ
ಕಾಂಗ್ರೆಸ್ ಶಾಸಕರ ಖರೀದಿ... ಖಾಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದಿ ಇಬ್ಬರು ; ಪ್ರತಿ ಶಾಸಕರಿಗೆ 5 ಕೋಟಿ - ಡಿಕೆಶಿ
ಕಾಂಗ್ರೆಸ್ ಶಾಸಕರ ಖರೀದಿ... ಖಾಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದಿ ಇಬ್ಬರು ; ಪ್ರತಿ ಶಾಸಕರಿಗೆ 5 ಕೋಟಿ - ಡಿಕೆಶಿ
 ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಖಂಡಿಸಿದ ಭಾರತ
ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಖಂಡಿಸಿದ ಭಾರತ
ಆತಂಕದ ಇಂಧನ ಸಂಗ್ರಹಣೆಯ ವಿರುದ್ಧ ಸೂಚನೆ ನೀಡಿದ ಕೇಂದ್ರ ಸರ್ಕಾರ
ಆತಂಕದ ಇಂಧನ ಸಂಗ್ರಹಣೆಯ ವಿರುದ್ಧ ಸೂಚನೆ ನೀಡಿದ ಕೇಂದ್ರ ಸರ್ಕಾರ
ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ-ಬಂಧಿತ ಎರಡು ಎಲ್‌ಪಿಜಿ ಟ್ಯಾಂಕರ್‌ಗಳಿಗೆ ಅನುಮತಿ ನೀಡಿದ  ಇರಾನ್
ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ-ಬಂಧಿತ ಎರಡು ಎಲ್‌ಪಿಜಿ ಟ್ಯಾಂಕರ್‌ಗಳಿಗೆ ಅನುಮತಿ ನೀಡಿದ ಇರಾನ್
ನನ್ನ ಕೊನೆಯ ಉಸಿರಿನವರೆಗೂ ನಾನು ರಾಜಕೀಯದಲ್ಲಿಯೇ ಇರುತ್ತೇನೆ - ಸಿಎಂ ಸಿದ್ದರಾಮಯ್ಯ
ನನ್ನ ಕೊನೆಯ ಉಸಿರಿನವರೆಗೂ ನಾನು ರಾಜಕೀಯದಲ್ಲಿಯೇ ಇರುತ್ತೇನೆ - ಸಿಎಂ ಸಿದ್ದರಾಮಯ್ಯ

ನ್ಯೂಸ್ MORE NEWS...