Sun,Jul07,2024
ಕನ್ನಡ / English

ಕೊಲೆ ಪ್ರಕರಣ : ನ್ಯಾಯಾಲಯದಲ್ಲಿ ಗಳಗಳನೆ ಕಣ್ಣೀರು ಇಟ್ಟ ದರ್ಶನ ; ಪೊಲೀಸ್ ಕಸ್ಟಡೀಗೆ ನೀಡಲಾಗಿದೆ | JANATA NEWS

11 Jun 2024
531

ಬೆಂಗಳೂರು : ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಟ ದರ್ಶನ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಇಂದು ಅವರನ್ನು ಬೆಂಗಳೂರಿನ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು.

ನ್ಯಾಯಾದೀಶರ ಎದುರು ಎ.1 ಆರೋಪಿ ಪವಿತ್ರಾ ಹಾಗೂ ಎ.2 ಆರೋಪಿ ದರ್ಶನ ಗಳಗಳನೆ ಕಣ್ಣೀರು ಇಟ್ಟರು ಎನ್ನಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಜನ ಕೋರ್ಟ್‌ಗೆ ಈ ಸಂದರ್ಭದಲ್ಲಿ ಹಾಜರಾಗಿದ್ದರು.

ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನ ದರ್ಶನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ನಟ ದರ್ಶನ, ಸೇರಿದಂತೆ 13 ಜನರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ, ಎನ್ನಲಾಗಿದೆ.

ನ್ಯಾಯಾಧೀಶರು ವಾದ ಪ್ರತಿವಾದನವನ್ನು ಆಲಿಸಿ ನಟ ದರ್ಶನ್‌ರನ್ನು ಆರು ದಿನ ಪೋಲಿಸ್‌ ಕಸ್ಟಡಿಗೆ ನೀಡಿದ್ದಾರೆ. ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿ ಇಂದು ಬೆಳಗಿನ ಜಾವ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಎರಡು ದಿನಗಳ ಹಿಂದೆ ನಗರದ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಅಪರಿಚಿತ ಮೃತ ದೇಹ ಸಿಕ್ಕಿದ್ದು, ಈ ಹಿನ್ನೆಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇದೇ ಪ್ರಕರಣ ಸಂಬಂಧ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದರ್ಶನ ಪರ ವಕೀಲ 14 ದಿನ ಪೊಲೀಸ್‌ ಕಸ್ಟಡಿಗೆ ಏಕೆ ಬೇಕು. ಈಗಾಗಲೇ ದರ್ಶನ ಮೊಬೈಲ್ ಸೀಜ್ ಆಗಿದೆ. ಅವರಿಗೆ ಕಿರುಕುಳ ನೀಡಬಾರದು. ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ಮನವಿಯನ್ನು ಸಹ ಮಾಡಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು.

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಶನಿವಾರ ರಾತ್ರಿ ಸುಮನಹಳ್ಳಿ ಸೇತುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದರ್ಶನ್‌ಗೆ ಆತ್ಮೀಯರಾಗಿರುವ ನಟಿ ಪವಿತ್ರಾ ಗೌಡ ಅವರಿಗೆ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು ಎಂದು ವರದಿಗಳು ಹೇಳಿವೆ.

English summary :Murder case: Darshan broke down in tears in the court ; given to police custody

ಅಗ್ನಿವೀರ ಪರಿಹಾರ ಕುರಿತು ಸುಳ್ಳು : ರಾಹುಲ್ ಗಾಂಧಿ ಆಪಾದನೆಗೆ ಸ್ಪಷ್ಟೀಕರಣ ನೀಡಿದ ಭಾರತೀಯ ಸೇನೆ
ಅಗ್ನಿವೀರ ಪರಿಹಾರ ಕುರಿತು ಸುಳ್ಳು : ರಾಹುಲ್ ಗಾಂಧಿ ಆಪಾದನೆಗೆ ಸ್ಪಷ್ಟೀಕರಣ ನೀಡಿದ ಭಾರತೀಯ ಸೇನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಲು ಪರಿಗಣಿಸುವಂತೆ ಪ್ರಧಾನಿ ಮೋದಿ ಸ್ಪೀಕರ್ ಗೆ ಒತ್ತಾಯ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಲು ಪರಿಗಣಿಸುವಂತೆ ಪ್ರಧಾನಿ ಮೋದಿ ಸ್ಪೀಕರ್ ಗೆ ಒತ್ತಾಯ
ನೀವು ಸುಳ್ಳು ಹೇಳುತ್ತಿದ್ದೀರಿ, ಸರ್ಕಾರ ರೈತರಿಂದ ಎಂಎಸ್‌ಪಿ ದರದಲ್ಲಿ ಖರೀದಿಸುತ್ತಿದೆ - ರಾಹುಲ್ ಗಾಂಧಿಗೆ ತರಾಟೆ ತೆಗೆದುಕೊಂಡ ಕೃಷಿ ಮಂತ್ರಿ
ನೀವು ಸುಳ್ಳು ಹೇಳುತ್ತಿದ್ದೀರಿ, ಸರ್ಕಾರ ರೈತರಿಂದ ಎಂಎಸ್‌ಪಿ ದರದಲ್ಲಿ ಖರೀದಿಸುತ್ತಿದೆ - ರಾಹುಲ್ ಗಾಂಧಿಗೆ ತರಾಟೆ ತೆಗೆದುಕೊಂಡ ಕೃಷಿ ಮಂತ್ರಿ
ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು 24ಗಂಟೆ “ಹಿಂಸೆ, ದ್ವೇಷ ಮತ್ತು ಸುಳ್ಳು - ರಾಹುಲ್ ಗಾಂಧಿ
ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು 24ಗಂಟೆ “ಹಿಂಸೆ, ದ್ವೇಷ ಮತ್ತು ಸುಳ್ಳು - ರಾಹುಲ್ ಗಾಂಧಿ
ರಾಹುಲ್ ದ್ರಾವಿಡ್ ಕೊಡುಗೆಗಳಿಗಾಗಿ, ಪೀಳಿಗೆಗೆ ಸ್ಪೂರ್ತಿದಾಯಕವಾಗಿದ್ದಕ್ಕೆ ಭಾರತ ಅವರಿಗೆ ಕೃತಜ್ಞರಾಗಿರುತ್ತದೆ - ಪ್ರಧಾನಿ ಮೋದಿ
ರಾಹುಲ್ ದ್ರಾವಿಡ್ ಕೊಡುಗೆಗಳಿಗಾಗಿ, ಪೀಳಿಗೆಗೆ ಸ್ಪೂರ್ತಿದಾಯಕವಾಗಿದ್ದಕ್ಕೆ ಭಾರತ ಅವರಿಗೆ ಕೃತಜ್ಞರಾಗಿರುತ್ತದೆ - ಪ್ರಧಾನಿ ಮೋದಿ
ಅಜೇಯ ಶೈಲಿಯಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಅಭಿನಂದಿಸಿದ  ಪ್ರಧಾನಿ ಮೋದಿ
ಅಜೇಯ ಶೈಲಿಯಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಸಿಎಂ ಕುರ್ಚಿ ಹಗ್ಗ ಜಗ್ಗಾಟ ಗಲಾಟೆ : ಕಾಂಗ್ರೆಸ್ ಹೈಕಮಾಂಡ್ ಗೆ  ಮತ್ತೊಮ್ಮೆ ತಲೆನೋವು?
ಸಿಎಂ ಕುರ್ಚಿ ಹಗ್ಗ ಜಗ್ಗಾಟ ಗಲಾಟೆ : ಕಾಂಗ್ರೆಸ್ ಹೈಕಮಾಂಡ್ ಗೆ ಮತ್ತೊಮ್ಮೆ ತಲೆನೋವು?
ಕುಸಿದ ಮೇಲ್ಛಾವಣಿ ರಚನೆಯನ್ನು 2009 ರಲ್ಲಿ ಮತ್ತೊಂದು ಕಂಪನಿ ನಿರ್ಮಿಸಿದೆ - ಎಲ್ ಅಂಡ್ ಟಿ
ಕುಸಿದ ಮೇಲ್ಛಾವಣಿ ರಚನೆಯನ್ನು 2009 ರಲ್ಲಿ ಮತ್ತೊಂದು ಕಂಪನಿ ನಿರ್ಮಿಸಿದೆ - ಎಲ್ ಅಂಡ್ ಟಿ
ಕುಸಿದ ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿಗೆ ಮೋದಿ ಹೊಣೆ ಮಾಡಲು ಹೊರಟ ವಿಪಕ್ಷ : 2009ರಲ್ಲಿ ಉದ್ಘಾಟಿಸದ್ದು - ವಿಮಾನಯಾನ ಮಂತ್ರಿ
ಕುಸಿದ ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿಗೆ ಮೋದಿ ಹೊಣೆ ಮಾಡಲು ಹೊರಟ ವಿಪಕ್ಷ : 2009ರಲ್ಲಿ ಉದ್ಘಾಟಿಸದ್ದು - ವಿಮಾನಯಾನ ಮಂತ್ರಿ
ದೊಡ್ಡ ಆರ್ಥಿಕ, ಕೃಷಿ, ಇವಿಎಂ, ಕಾಶ್ಮೀರ, ತುರ್ತು ಪರಿಸ್ಥಿತಿ : ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ
ದೊಡ್ಡ ಆರ್ಥಿಕ, ಕೃಷಿ, ಇವಿಎಂ, ಕಾಶ್ಮೀರ, ತುರ್ತು ಪರಿಸ್ಥಿತಿ : ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ
ಲೋಕಸಭೆಯಿಂದ ಪವಿತ್ರ ಸೆಂಗೊಲ್ ತೆಗೆದು ಹಾಕಲು ಒತ್ತಾಯಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ ಪ್ರತಿಪಕ್ಷ
ಲೋಕಸಭೆಯಿಂದ ಪವಿತ್ರ ಸೆಂಗೊಲ್ ತೆಗೆದು ಹಾಕಲು ಒತ್ತಾಯಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ ಪ್ರತಿಪಕ್ಷ
ತುರ್ತು ಪರಿಸ್ಥಿತಿಯನ್ನು ಹೇರುವ ಅಂದಿನ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರವನ್ನು ಖಂಡಿಸಿದ ಸ್ಪೀಕರ್ ಬಿರ್ಲಾ
ತುರ್ತು ಪರಿಸ್ಥಿತಿಯನ್ನು ಹೇರುವ ಅಂದಿನ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರವನ್ನು ಖಂಡಿಸಿದ ಸ್ಪೀಕರ್ ಬಿರ್ಲಾ

ನ್ಯೂಸ್ MORE NEWS...