Fri,Oct03,2025
ಕನ್ನಡ / English

ತಮ್ಮ ಭಾಷಣದ ಮಧ್ಯೆ ಹೊರಹೋಗುತ್ತಿದ್ದ ಜನರಿಗೆ ಗದರಿಸಿದ ಸಿಎಂ ಸಿದ್ದರಾಮಯ್ಯ : ಹೊರ ಬಿಡದಂತೆ ಪೊಲೀಸರಿಗೆ ಆದೇಶ | JANATA NEWS

22 Sep 2025

ಮೈಸೂರು : ದಸರಾ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ನವರು ತಮ್ಮ ಭಾಷಣದ ಮಧ್ಯೆ ಜನ ಎದ್ದು ಕಾರ್ಯಕ್ರಮದಿಂದ ಹೊರಗಡೆ ಹೋಗುತ್ತಿರುವುದನ್ನು ಕಂಡು ಅತೀವ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಜನರು ತೋರಿದ ಈ ಅಗೌರವದಿಂದ ಕೋಪಗೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು ಇಷ್ಟಕ್ಕೆ ಸುಮ್ಮನಾಗದೆ, "ಅದು ಹೇಯ್ .. ಅದ್ಯಾವನೋ ಅದು .. ಒಂದು ಅರ್ಧ ಗಂಟೆ ಕಾರ್ಯಕ್ರಮ ಮುಗಿಯುವವರೆಗೂ ಕುಳಿತುಕೊಳ್ಳಲು ಆಗುವುದಿಲ್ಲವೋ.. ಇನ್ ಸ್ವಲ್ಪ ಇನ್ನು ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಆಗುವುದಿಲ್ಲವೇ?.. ಹೇಯ್ .. ಯಾಕೆ ಬರುತ್ತೀರಿ, ಮನೇಲಿ ಇರಬೇಕಾಗಿತ್ತು", ಎಂದು ಗದರಿದ್ದಾರೆ.

ಅಷ್ಟೇ ಅಲ್ಲದೇ, ಪೊಲೀಸರನ್ನು ಕುರಿತು ಆದೇಶಿಸಿದ ಸಿಎಂ ಸಿದ್ದರಾಮಯ್ಯ ಅವರು, "ಪೊಲೀಸರೇ ಬಿಡಬೇಡಿ ಯಾರನ್ನು ವಾಪಸ್ ಕಳಿಸಿ", ಎಂದು ಮೈಕ್ ನಲ್ಲಿಯೇ ಗದರಿಸುವ ಮೂಲಕ ಕಾರ್ಯಕ್ರಮದ ಮಧ್ಯೆ ಎದ್ದು ಹೊರ ಹೋಗುತ್ತಿದ್ದ ಜನರನ್ನು ತಡೆದು ಪುನಃ ಕಾರ್ಯಕ್ರಮದಲ್ಲೇ ಬಲವಂತವಾಗಿ ಉಳಿಸಿಕೊಳ್ಳಲು ಮುಂದಾದರು.

ಇದಕ್ಕೂ ಮುನ್ನ, ಹಲವು ದಿನಗಳ ಗೊಂದಲ, ಟೀಕೆ,ವಿವಾದಗಳ ಬಳಿಕ ಇಂದು ಮೈಸೂರು ದಸರಾ ಕಾರ್ಯಕ್ರಮವನ್ನು ಸಾಹಿತಿ ಬಾನು ಮುಷ್ತಾಕ್‌ ಅವರು ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪ ನಮನದ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಉಪಸ್ಥಿತರಿದ್ದರು.

English summary :CM Siddaramaiah reprimanded people leaving during his speech: instructed the police to not let them go

ಅಮೆರಿಕ ಒತ್ತಡಕ್ಕೆ ಮಣಿದು 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೈಗೊಳ್ಳದ ಯುಪಿಎ ಸರ್ಕಾರ - ಚಿದಂಬರಂ
ಅಮೆರಿಕ ಒತ್ತಡಕ್ಕೆ ಮಣಿದು 2008 ರ ಮುಂಬೈ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೈಗೊಳ್ಳದ ಯುಪಿಎ ಸರ್ಕಾರ - ಚಿದಂಬರಂ
ಆಪರೇಷನ್ ಸಿಂಧೂರ್ ಆಟದ ಮೈದಾನದಲ್ಲಿ - ಪ್ರಧಾನಿ ಮೋದಿ ಪೋಸ್ಟ್ ನ್ನು ಶ್ಲಾಘಿಸಿದ ಸೂರ್ಯಕುಮಾರ ಯಾದವ್
ಆಪರೇಷನ್ ಸಿಂಧೂರ್ ಆಟದ ಮೈದಾನದಲ್ಲಿ - ಪ್ರಧಾನಿ ಮೋದಿ ಪೋಸ್ಟ್ ನ್ನು ಶ್ಲಾಘಿಸಿದ ಸೂರ್ಯಕುಮಾರ ಯಾದವ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು ಎಂದು ಕರೆದ - ವಿದೇಶಾಂಗ ಮಂತ್ರಿ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು ಎಂದು ಕರೆದ - ವಿದೇಶಾಂಗ ಮಂತ್ರಿ
ಚಾಮುಂಡಿ ಬೆಟ್ಟದ ಪಾದದ ಬಳಿಯ ರುದ್ರಭೂಮಿಯಲ್ಲಿ ನೆರವೇರಿದ ಡಾ. ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆ
ಚಾಮುಂಡಿ ಬೆಟ್ಟದ ಪಾದದ ಬಳಿಯ ರುದ್ರಭೂಮಿಯಲ್ಲಿ ನೆರವೇರಿದ ಡಾ. ಎಸ್.ಎಲ್.ಭೈರಪ್ಪ ಅಂತ್ಯಕ್ರಿಯೆ
ಲೇಹ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ : ಪ್ರಚೋದನಕಾರಿ ಭಾಷಣ ನೀಡಿದ್ದ ವಾಂಗ್‌ಚುಕ್ ಬಂಧನ
ಲೇಹ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ : ಪ್ರಚೋದನಕಾರಿ ಭಾಷಣ ನೀಡಿದ್ದ ವಾಂಗ್‌ಚುಕ್ ಬಂಧನ
ಭಾರತವು ರೈಲು ಆಧಾರಿತ ಮೊಬೈಲ್ ಲಾಂಚರ್‌ನಿಂದ ಅಗ್ನಿ-ಪ್ರೈಮ್ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷಿಸಿದ : ಮೊದಲ ರಾಷ್ಟ್ರ
ಭಾರತವು ರೈಲು ಆಧಾರಿತ ಮೊಬೈಲ್ ಲಾಂಚರ್‌ನಿಂದ ಅಗ್ನಿ-ಪ್ರೈಮ್ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷಿಸಿದ : ಮೊದಲ ರಾಷ್ಟ್ರ
ಏಕಕಾಲಕ್ಕೆ ಅಮೆರಿಕ ಪ್ರವಾಸ ಕೈಗೊಂಡಿರುವ 2 ಕೇಂದ್ರ ಮಂತ್ರಿಗಳು : ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಕ್ಷಣಗಣನೆ
ಏಕಕಾಲಕ್ಕೆ ಅಮೆರಿಕ ಪ್ರವಾಸ ಕೈಗೊಂಡಿರುವ 2 ಕೇಂದ್ರ ಮಂತ್ರಿಗಳು : ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಕ್ಷಣಗಣನೆ
ತಮ್ಮ ಭಾಷಣದ ಮಧ್ಯೆ ಹೊರಹೋಗುತ್ತಿದ್ದ ಜನರಿಗೆ ಗದರಿಸಿದ ಸಿಎಂ ಸಿದ್ದರಾಮಯ್ಯ : ಹೊರ ಬಿಡದಂತೆ ಪೊಲೀಸರಿಗೆ ಆದೇಶ
ತಮ್ಮ ಭಾಷಣದ ಮಧ್ಯೆ ಹೊರಹೋಗುತ್ತಿದ್ದ ಜನರಿಗೆ ಗದರಿಸಿದ ಸಿಎಂ ಸಿದ್ದರಾಮಯ್ಯ : ಹೊರ ಬಿಡದಂತೆ ಪೊಲೀಸರಿಗೆ ಆದೇಶ
ಪ್ರಧಾನಿ ಮೋದಿ ಹುಟ್ಟುಹಬ್ಬದ ಶುಭಾಶಯ ಕೋರಿ ವಿಡಿಯೋ ಶೇರ್ ಮಾಡುವುದು ಈಗ ಹೊಸ ಟ್ರೆಂಡ್
ಪ್ರಧಾನಿ ಮೋದಿ ಹುಟ್ಟುಹಬ್ಬದ ಶುಭಾಶಯ ಕೋರಿ ವಿಡಿಯೋ ಶೇರ್ ಮಾಡುವುದು ಈಗ ಹೊಸ ಟ್ರೆಂಡ್
15 ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿ.ಪಿ. ರಾಧಾಕೃಷ್ಣನ್
15 ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿ.ಪಿ. ರಾಧಾಕೃಷ್ಣನ್
ಮತ ಕಳ್ಳತನ ಆರೋಪದ ರಾಹುಲ್ ಗಾಂಧಿಯವರ ಪಿಡಿಎಫ್‌ ಮ್ಯಾನ್ಮಾರ್ ಸಮಯ ವಲಯ ತೋರಿಸುವ ಮೆಟಾಡೇಟಾ - ಬಿಜೆಪಿ ಸಾಕ್ಷ್ಯ
ಮತ ಕಳ್ಳತನ ಆರೋಪದ ರಾಹುಲ್ ಗಾಂಧಿಯವರ ಪಿಡಿಎಫ್‌ ಮ್ಯಾನ್ಮಾರ್ ಸಮಯ ವಲಯ ತೋರಿಸುವ ಮೆಟಾಡೇಟಾ - ಬಿಜೆಪಿ ಸಾಕ್ಷ್ಯ
ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವಂಚಿಸಿದ ಪ್ರಕರಣ : ಇಡಿ ದಾಳಿಯಲ್ಲಿ ರೂ.100 ಕೋಟಿ ಚಿನ್ನ ಬೆಳ್ಳಿ ವಶ
ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ವಂಚಿಸಿದ ಪ್ರಕರಣ : ಇಡಿ ದಾಳಿಯಲ್ಲಿ ರೂ.100 ಕೋಟಿ ಚಿನ್ನ ಬೆಳ್ಳಿ ವಶ

ನ್ಯೂಸ್ MORE NEWS...