ಕನ್ನಡದ ಹಿರಿಯ ನಟ ಶಂಖನಾದ ಅರವಿಂದ್ ಕೊವಿಡ್ಗೆ ಬಲಿ! | Filmz news
: ಕನ್ನಡದ ಹಿರಿಯ ನಟ, ನಿರ್ಮಾಪಕ ಶಂಖನಾದ ಅರವಿಂದ್ ಕೊವಿಡ್ಗೆ ಬಲಿಯಾಗಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಮಂದಿ ಸಂತಾಪ ಸೂಚಿಸಿದ್ದಾರೆ.
ಎರಡು ದಿನಗಳ ಹಿಂದೆ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದ ನಟ ಶಂಖನಾದ ಅರವಿಂದ್, ಇಂದು ಮಧ್ಯಾಹ್ನ ಉಸಿರಾಟದ ಸಮಸ್ಯೆಯಿಂದ ಇಹಲೋಕ ತ್ಯಜಿಸಿದ್ದಾರೆ.
250 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಶಂಕನಾದ ಅರವಿಂದ್ ನಟಿಸಿದ್ದಾರೆ. ಸಾಕಷ್ಟು ಪೋಷಕ ಪಾತ್ರಗಳಿಗೆ ಶಂಕನಾದ ಅರವಿಂದ್ ಜೀವ ತುಂಬಿದ್ದಾರೆ.
ಬೆಟ್ಟದ ಹೂವಿನಲ್ಲಿ ಬಿಸಿಲೆ ಇರಲಿ ಮಳೆಯೇ ಬರಲಿ ಅನ್ನೋ ಹಾಡಿನಲ್ಲಿ ಅರವಿಂದ್ ಅವರ ಇಂಗ್ಲೀಷ್ ಎಲ್ಲರ ಗಮನ ಸೆಳೆದಿತ್ತು. ಶಂಖನಾದ ಸಿನಿಮಾದ ಮುಇಲಕ ನಟನಾಗಿದ್ದ ಅರವಿಂದ್, ಶಂಖನಾದ ಅರವಿಂದ್ ಅಂತಾನೇ ಖ್ಯಾತನಾಮರಾದ್ರು.
English summary :Sandalwood