ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಏರಿಕೆಯಿಂದ ರೈತರ ಆದಾಯ ಹೆಚ್ಚಳ. ಜೀವನ ಮತ್ತ ಸುಧಾರಣೆ - ಪ್ರಧಾನಿ ಮೋದಿ | ಜನತಾ ನ್ಯೂಸ್
ನವದೆಹಲಿ : ಸರ್ಕಾರ ಹಲವಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಯನ್ನು ಬುಧವಾರ ಹೆಚ್ಚಿಸುವುದರೊಂದಿಗೆ, ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರೈತರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ರೈತರ ಹಿತದೃಷ್ಟಿಯಿಂದ, ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಅನೇಕ ಬೆಳೆಗಳ ಎಂಎಸ್ಪಿ ಹೆಚ್ಚಳದಿಂದ, ರೈತ ಸಹೋದರ ಸಹೋದರಿಯರ ಆದಾಯ ಹೆಚ್ಚಾಗುತ್ತದೆ ಮತ್ತು ಅವರ ಜೀವನ ಮಟ್ಟವೂ ಸುಧಾರಿಸುತ್ತದೆ, ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
2021-22 ಬೆಳೆ ವರ್ಷಕ್ಕೆ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು(ಎಂಎಸ್ಪಿ) ಕ್ವಿಂಟಲ್ಗೆ ರೂ.72/- ಹೆಚ್ಚಳದಿಂದ 1,940 ರೂ.ಗೆ ಏರಿಸಲಾಗಿದ್ದು, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಧಾನ್ಯಗಳ ದರವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
ವಾಣಿಜ್ಯ ಬೆಳೆಗಳಲ್ಲಿ, ಹತ್ತಿಯ ಎಂಎಸ್ಪಿ ಕ್ವಿಂಟಲ್ಗೆ ರೂ.211/- ಹೆಚ್ಚಳದಿಂದ ಮಧ್ಯಮ-ಪ್ರಮುಖ ವಿಧಕ್ಕೆ 5,726 ರೂ.ಗೆ ಮತ್ತು 2021-22 ಬೆಳೆ ವರ್ಷಕ್ಕೆ(ಜುಲೈ-ಜೂನ್) ದೀರ್ಘಾವಧಿಯ ಪ್ರಭೇದಕ್ಕೆ ಕ್ವಿಂಟಲ್ಗೆ ರೂ.200/- ಹೆಚ್ಚಳದಿಂದ 6,025 ರೂ.ಗೆ ಹೆಚ್ಚಿಸಲಾಗಿದೆ.