ಮೂಕ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಬಂಧನ | ಜನತಾ ನ್ಯೂಸ್
ಚಿತ್ರದುರ್ಗ : ತುಪ್ಪದ ಹಳ್ಳಿ ಲಂವಾಹಣಟ್ಟಿ ನಿವಾಸಿ ಮೂವತ್ತೈದು ವರ್ಷದ ವಿಶೇಷ ಚೇತನ ಮೂಕ ಮಹಿಳೆ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ
ಮಾತು ಬಾರದ ಈ ಮೂಕ ಹೆಂಗಸು ದಾವಣಗೆರೆಗೆ ಹೋಗಿ ಬಸ್ಸಿನಲ್ಲಿ ಬಂದು ತುಪ್ಪದಹಳ್ಳಿ ಗ್ರಾಮದಲ್ಲಿ ಇಳಿದಿದ್ದಾರೆ. ಅಲ್ಲಿಂದ ಸ್ವಲ್ಪವೇ ದೂರು ನಡದು ಹೋಗುತ್ತಿದ್ದಂತೆ ಅದೇ ಬಸ್ಸಿನಲ್ಲಿ ಬಂದಿದ್ದ ವ್ಯಕ್ತಿಯೋರ್ವ ಆಕೆಯನ್ನ ಹಿಡಿದು ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.
ಬಳಿಕ ಪ್ರಕರಣ ನಡೆದ ಕುರಿತು ತಪ್ಪದಹಳ್ಳಿ ಗ್ರಾಮದ ಕಲ್ಯಾಣ ಮಂಟಪದಲ್ಲಿ ಆಳವಡಿಸಿದ್ದ ಸಿಸಿ ಕ್ಯಾಮಾರ ಪರಿಶೀಲನೆ ಮಾಡಿದಾಗ ಅತ್ಯಾಚಾರ ಮಾಡುವ ಮುನ್ನ ಮಹಿಳೆ ನಡೆದು ಹೋಗಿದ್ದು, ಮಹಿಳೆಗೂ ಮುನ್ನ ಅತ್ಯಾಚಾರ ಆರೋಪಿ ಅದೇ ಮಾರ್ಗದಲ್ಲಿ ಚಲಿಸಿದ್ದು ಸೇರಿ ಆರೋಪಿಯ ಚಲನವಲನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಅದರಂತೆ ಪ್ರಕರಣ ಬೆನ್ನು ಹತ್ತಿದ ಪೋಲೀಸರು ಚಿತ್ರದುರ್ಗ ತಾಲ್ಲೂಕಿನ ಲಕ್ಷ್ಮೀ ಸಾಗರ ಮೂಲದ ನಾಗರಾಜ್ ಎಂಬ ಆರೋಪಿಯನ್ನ ಬಂಧಿಸಿದ್ದಾರೆ.