ರಾಜ್ಯದ ಜಿಲ್ಲಾ ಉಸ್ತುವಾರಿ ಸಚಿವರ ನೇಮಿಸಿದ ರಾಜ್ಯ ಸರ್ಕಾರ, ಹೊಸ ಉಸ್ತುವಾರಿ ಪಟ್ಟಿ ನೋಡಿ | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಆ ಜಿಲ್ಲೆಗಳಲ್ಲಿ ಕೊವೀಡ್ ನಿಯಂತ್ರಣ ಮಾಡುವುದು ಸವಾಲಾಗಿದೆ. ಈ ಮದ್ಯೆ ರಾಜ್ಯದ ಜಿಲ್ಲಾ ಉಸ್ತುವಾರಿಯಲ್ಲಿ ಹಠಾತ್ ಬದಲಾವಣೆ ಆಗಿದ್ದು, ಕೊವಿಡ್, ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಹಿಂದಿನ ಆದೇಶವನ್ನು ರದ್ದುಪಡಿಸಿ, ಹೊಸ ಆದೇಶ ಹೊರಡಿಸಲಾಗಿದೆ.
ಕಳೆದ ವರ್ಷದ ಸೆ. 10ರಂದು ಹೊರಡಿಸಲಾಗಿದ್ದ ಜಿಲ್ಲಾ ಉಸ್ತುವಾರಿ ಪಟ್ಟಿ ರದ್ದು ಮಾಡಲಾಗಿದ್ದು, ಇಂದಿನಿಂದಲೇ ಜಾರಿಗೆ ಬರುವಂತೆ ಹೊಸದಾಗಿ ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡಲಾಗಿದೆ.
ಸಿಎಂ ಬಸವರಾಜ್ ಬೊಮ್ಮಾಯಿ - ಬೆಂಗಳೂರು ನಗರ
ಡಾ.ಕೆ. ಸುಧಾಕರ್ -ಬೆಂಗಳೂರು ಗ್ರಾಮೀಣ
ಅಶ್ವಥ್ ನಾರಾಯಣ್ - ರಾಮನಗರ
ಎಂಟಿಬಿ -ಚಿಕ್ಕಬಳ್ಳಾಪುರ
ಬಿ.ಸಿ.ಪಾಟೀಲ್ -ಚಿತ್ರದುರ್ಗ-ಗದಗ
ಬಿ.ಎಸ್.ಬಸವರಾಜ್ - ದಾವಣಗೆರೆ
ಮುನಿರತ್ನ - ಕೋಲಾರ
ಕೆ,ಸಿ.ನಾರಾಯಣ ಗೌಡ -ಶಿವಮೊಗ್ಗ
ಶಶಿಕಲಾ ಜೊಲ್ಲೆ -ವಿಜಯನಗರ
ಎಸ್.ಟಿ.ಸೋಮಶೇಖರ್ -ಮೈಸೂರು
ಗೋವಿಂದ ಕಾರಜೋಳ -ಬೆಳಗಾವಿ
ಸಿ.ಸಿ. ಪಾಟೀಲ್ -ಬಾಗಲಕೋಟೆ
ಕೋಟಾ ಶ್ರೀನಿವಾಸ್ ಪೂಜಾರಿ -ಉತ್ತರ ಕನ್ನಡ
ಶಿವರಾಮ್ ಹೆಬ್ಬಾರ್ -ಹಾವೇರಿ
ಹಾಲಪ್ಪ ಆಚಾರ್ -ಧಾರವಾಡ
ಅರಗ ಜ್ಞಾನೇಂದ್ರ -ತುಮಕೂರು
ಶ್ರೀ.ರಾಮುಲು -ಬಳ್ಳಾರಿ
ಮುರುಗೇಶ್ ರುದ್ರಪ್ಪ ನಿರಾಣಿ -ಕಲಬುರಗಿ
ಆನಂದ ಸಿಂಗ್ -ಕೊಪ್ಪಳ
ಶಂಕರ್ ಬಿ ಪಾಟೀಲ್ ರಾಯಚೂರು -ಬೀದರ್
ಪ್ರಭು ಚವ್ಹಾಣ್ -ಯಾದಗಿರಿ
ಉಮೇಶ್ ಕತ್ತಿ -ವಿಜಯಪುರ
ಶ್ರೀ. ಎಸ್. ಅಂಗಾರ -ಉಡುಪಿ
ವಿ. ಸೋಮಣ್ಣ -ಚಾಮರಾಜನಗರ
ಕೆ.ಎಸ್.ಈಶ್ವರಪ್ಪ -ಚಿಕ್ಕಮಗಳೂರು
ಸುನೀಲ್ ಕುಮಾರ್ -ದಕ್ಷಿಣ ಕನ್ನಡ
ಗೋಪಾಲಯ್ಯ -ಹಾಸನ-ಮಂಡ್ಯ
ಬಿ.ಸಿ.ನಾಗೇಶ್ -ಕೊಡಗು