ಹಳ್ಳದಲ್ಲಿ ಕೊಚ್ಚಿ ಹೋದ ಟ್ರ್ಯಾಕ್ಟರ್ ಮೇಲೆತ್ತಲು ಹರಸಾಹಸ: ಗ್ರಾಮಸ್ಥರಿಂದ ತಪ್ಪಿದ ಭಾರೀ ಅನಾಹುತ | Janata news
ಕೊಪ್ಪಳ: : ಎತ್ತಿನ ಬಂಡಿ ಹರಿಯುತ್ತಿರುವ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು ಅದರಲ್ಲಿದ್ದ ನಾಲ್ವರು ಪ್ರಣಾಪಾಯದಿಂದ ಪಾರಾದ ಘಟನೆ ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ನೆಲೋಗಿಪುರ ಗ್ರಾಮದ ರೈತ ಟ್ರ್ಯಾಕ್ಟರ್ ಓಡಿಸಿಕೊಂಡು ಹೋಗುವಾಗ ಬೈರಾಪುರ ಗ್ರಾಮದ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಟ್ರ್ಯಾಕ್ಟರ್ ಕೊಚ್ಚಿಕೊಂಡು ಹೋಗಿದೆ.
ಬಂಡಿಯಲ್ಲಿದ್ದ ಮೂವರು ಪುರುಷರು ಹಾಗೂ ಒಬ್ಬ ಮಹಿಳೆ ಸೇರಿ ನಾಲ್ವರೂ ಕೊಚ್ಚಿ ಹೋಗುತ್ತಿದ್ದರು. ಬಂಡಿಯನ್ನು ಮೇಲೆತ್ತಲು ರೈತರು ಹರಸಾಹಸಪಟ್ಟಿದ್ದಾರೆ.
ಗ್ರಾಮಸ್ಥರು ನಾಲ್ವರನ್ನೂ ರಕ್ಷಣೆ ಮಾಡಿದ್ದಾರೆ. ಪ್ರಾಣದ ಹಂಗು ತೊರೆದು ಜೆಸಿಬಿ ಮೂಲಕ ಟ್ರ್ಯಾಕ್ಟರ್ ಮೇಲೆತ್ತಿದ್ದಾರೆ. ಗ್ರಾಮಸ್ಧರ ಸಮಯ ಪ್ರಜ್ಞೆಯಿಂದಾಗಿ ನಡೆಯಬೇಕಿದ್ದ ಭಾರೀ ಅನಾಹುತ ಒಂದು ತಪ್ಪಿದೆ.