ಬಾಡಿಗೆ ರೂಮ್ನಲ್ಲಿ 15 ವರ್ಷದ ಬಾಲಕಿ, ಯುವಕ ನೇಣಿಗೆ ಶರಣು! ಕಾರಣ ಏನು ಗೊತ್ತಾ? | Janata news
ಬಾಗಲಕೋಟೆ : ಬಾಡಿಗೆ ರೂಮ್ನಲ್ಲಿ ಅಪ್ರಾಪ್ತೆ, ಯುವಕ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಮುಧೋಳ ನಗರದ ಬಸವ ನಗರದಲ್ಲಿ ನಡೆದಿದೆ. 23 ವರ್ಷದ ಆನಂದ್, 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡವರು.
ಆನಂದ ವಾಸವಿದ್ದ ಬಸವ ನಗರದ ಬಾಡಿಗೆ ರೂಮಿನಲ್ಲಿ ಇಬ್ಬರು ನೇಣಿಗೆ ಶರಣಾಗಿದ್ದಾರೆ. ಮುಧೋಳ ನಗರದ ರನ್ನ ವೃತ್ತದ ಬಳಿಯ ಬೇಕರಿಯಲ್ಲಿ ಆನಂದ ಕೆಲಸ ಮಾಡುತ್ತಿದ್ದ.
ಅಪ್ರಾಪ್ತೆ ಮತ್ತು ಯುವಕ ಇಬ್ಬರೂ ಒಂದೇ ಗ್ರಾಮದವರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ.
ಯುವಕ ಸಾಯುವ ಮುನ್ನ ವಾಟ್ಸಾಪ್ನಲ್ಲಿ ಆಲ್ ಪ್ರೆಂಡ್ಸ್ ಮಿಸ್ ಯು, ಅವ್ವ ಅಪ್ಪ ಮಿಸ್ ಯು ಎಂದು ಸ್ಟೇಟಸ್ ಹಾಕಿದ್ದಾನೆ. ಇದೀಗ ಆತ್ಮಹತ್ಯೆಗೆ ಶರಣಾಗಿರುವುದು ಇಬ್ಬರ ಕುಟುಂಬಕ್ಕೂ ಆಘಾತವಾಗಿದೆ. ಆದರೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮುಧೋಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.