ರಾಜ್ಯದ ರೈತರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ! | Janata news
ಮಂಡ್ಯ : ರಾಜ್ಯದ ರೈತರಿಗೆ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಸಿಹಿಸುದ್ದಿ ನೀಡಿದ್ದು, ರಾಜ್ಯ ರೈತರಿಗೆ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಪೂರೈಸಲಾಗುತ್ತಿದ್ದು, ಯಾವುದೇ ಕೊರತೆ ಇಲ್ಲ ಎಂದು ಹೇಳಿದ್ದಾರೆ.
ಮದ್ದೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರಸಗೊಬ್ಬರ ತೊಂದರೆ ಇಲ್ಲ. ಈ ವಿಚಾರವಾಗಿ ಕೃಷಿ ಸಚಿವ ಬಿಸಿ ಪಾಟೀಲ್ ಗೆ ತಿಳಿಸಿದ್ದೇನೆ. ಎಲ್ಲ ಗೋಡನ್ ಗಳಲ್ಲಿ ರಸಗೊಬ್ಬರ ಸಂಗ್ರಹವಿದೆ. ಆದರೂ ಬ್ಲಾಕ್ ಮಾಡ್ತಿದ್ದಾರೆ. ಆದ್ದರಿಂದ ದಾಳಿ ಮಾಡಿ ಎಂದು ಕೃ಼ಷಿ ಸಚಿವರಿಗೆ ತಿಳಿಸಿದ್ದೇನೆ ಎಂದರು.
ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ, ಎಲ್ಲ ಗೋಡನ್ ಗಳಲ್ಲಿ ರಸಗೊಬ್ಬರ ಸಂಗ್ರಹವಿದೆ. ಆದರೂ ಬ್ಲಾಕ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 148 ಲೈಸೆನ್ಸ್ ರದ್ದು ಮಾಡಿದ್ದೇವೆ. ಗೋಡನ್ ಫುಲ್ ಇದ್ರೂ ಹೊರಗಡೆ ನೋ ಸ್ಟಾಕ್ ಬೋರ್ಡ್ ಹಾಕುತ್ತಿದ್ದಾರೆ ಎಂದರು. ಅಧಿಕಾರಿಗಳು ಮತ್ತು ಮಾಲೀಕರು ಸೇರಿ ಈ ಅಕ್ರಮ ಮಾಡಿದ್ದಾರೆ. ಮೊನ್ನೆ ಎಲ್ಲಾ ಕ್ಲೀಯರ್ ಮಾಡಲಾಗಿದೆ ಎಂದರು.