ಮುಸ್ಲಿಂ ಯುವತಿಯ ಪ್ರೀತಿಸಿದ್ದ ಹುಡುಗಿ ಮನೆಯವರಿಂದಲೇ ಯುವಕನ ಹತ್ಯೆ ! | Janata news
ರಾಮನಗರ: : ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ಭೋವಿ ಜನಾಂಗದ ಯುವಕ ನನ್ನು ಯುವತಿಯ ತಂದೆಯೇ ಕೊಲೆ ಮಾಡಿದ ಘಟನೆ ಮಾಗಡಿ ತಾಲ್ಲೂಕಿನ ಕನಕೇನಹಳ್ಳಿ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.
ನೆಲಮಂಗಲ ತಾಲ್ಲೂಕಿನ ಬಸವೇನ ಹಳ್ಳಿ ಗ್ರಾಮದ ಲಕ್ಷ್ಮೀಪತಿ (25) ಕೊಲೆಯಾದ ಯುವಕ. ಕನಕೇನಹಳ್ಳಿ ಗ್ರಾಮದ ಮುಸ್ಲಿಂ ಯುವತಿ ಮತ್ತು ಲಕ್ಷ್ಮೀಪತಿ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು.
ಲಕ್ಷ್ಮೀಪತಿ ಹಾಗೂ ನೆಲಮಂಗಲ ಬಳಿಯ ಇಸ್ಲಾಂಪುರ ಗ್ರಾಮದ ಯುವತಿ 3 ವರ್ಷಗಳಿಂದ ಗಾರ್ವೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿ ಮನೆಯವರ ವಿರೋಧವಿತ್ತು.
ಕಳೆದ ವರ್ಷ ಈ ಜೋಡಿ ಮನೆ ತೊರೆದು ಹೋಗಿತ್ತು. ರಾಜಿ ಬಳಿಕ ಮರಳಿ ಕರೆತರಲಾಗಿತ್ತು. ಮದುವೆ ಮಾತುಕತೆಗೆ ಬರುವಂತೆ ಯುವತಿಯ ತಂದೆ ಲಕ್ಷ್ಮೀಪತಿ ಹಾಗೂ ಆತನ ಸಹೋದರ ನಟರಾಜ್ನನ್ನು ಮನೆಗೆ ಕರೆದಿದ್ದಾನೆ.
ಕಂಕೇನಹಳ್ಳಿ ಲಾಯಾ ದರ್ಗಾ ಬಳಿ ಲಕ್ಷ್ಮೀಪತಿಯ ಕೈಕಾಲು ಕಟ್ಟಿ ಆತನ ಸೊಂಟದಲ್ಲಿದ್ದ ಬೆಲ್ಟ್ ತೆಗೆದು ಕುತ್ತಿಗೆಗೆ ಬಿಗಿದು, ಮದ್ಯದ ಬಾಟಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಈ ವಿಚಾರವನ್ನು ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ನಟರಾಜ್ಗೆ ಬೆದರಿಸಿ ಪರಾರಿಯಾಗಿದ್ದರು.
ಲಕ್ಷ್ಮೀಪತಿಗೆ ಯುವತಿಯಿಂದ ಕರೆ ಮಾಡಿಸಿದ ಸಂಬಂಧಿಗಳು ಮದುವೆ ವಿಷಯ ಮಾತನಾಡಲು ಸೋಲೂರು ಬಳಿ ಬರುವಂತೆ ತಿಳಿಸಿದ್ದಾರೆ. ನಟರಾಜ್ ಎಂಬುವರ ಜತೆ ಲಕ್ಷ್ಮೀಪತಿ ಹೋಗಿದ್ದಾನೆ.
ಈ ಸಂಬಂಧ ನಿಜಾಮುದ್ದೀನ್ ಮತ್ತು ಸಿಕಂದರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ರತ್ ಹಾಗೂ ಆಟೊ ಮೊಹಮ್ಮದ್ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.