ಜಮೀನಿನಲ್ಲಿ ಸಿಕ್ತು ₹ 500, ₹ 2 ಸಾವಿರ ಮುಖಬೆಲೆಯ ಕಂತೆ-ಕಂತೆ ಹಣ! | Janata news
ಚಿತ್ರದುರ್ಗ : ಚಳ್ಳಕೆರೆ ತಾಲ್ಲೂಕಿನ ಬುಕ್ಲೊರಹಳ್ಳಿಯ ಜಮೀನೊಂದರಲ್ಲಿ ಗುರುವಾರ ಕಂತೆ-ಕಂತೆ ಹಣ ಪತ್ತೆಯಾಗಿದೆ. ಜಾಲಿಗಿಡದ ಪೊದಯ ಸಮೀಪ ₹ 50, ₹ 100 ಹಾಗೂ ₹ 2 ಸಾವಿರ ಮುಖಬೆಲೆಯ ಹಣ ಸಿಕ್ಕಿದೆ.
ದುಷ್ಕರ್ಮಿಗಳು ಕದ್ದಿರೋ ಹಣವನ್ನ ಹೆದರಿ ಬಿಸಾಕಿ ಹೋಗಿರುವ ಅನುಮಾನ ವ್ಯಕ್ತವಾಗಿದೆ.
ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ದಿಲೀಪ್ ಬ್ಯುಲ್ಡ್ ಕಂಪನಿಯ ಕಚೇರಿ ಕೂಡ ಸಮೀಪದಲ್ಲೇ ಇದೆ. ಕೆಲ ದಿನಗಳ ಹಿಂದೆ ಇದೇ ಕಚೇರಿಯಲ್ಲಿ ₹ 36 ಲಕ್ಷ ಹಣ ಕಳವಾಗಿತ್ತು. ಬ್ಯಾಂಕಿನಿಂದ ಬಿಡಿಸಿಕೊಂಡು ತಂದಿದ್ದ ಹಣವನ್ನು ಚಾವಣಿ ಮುರಿದು ಕಳವು ಮಾಡಲಾಗಿತ್ತು.
ಈ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಗುರುವಾರ ಬೆಳಗ್ಗೆ ಹಣ ಕಂಪನಿಯ ಹಿಂಭಾಗದ ಜಮೀನಿನ ಬೇಲಿ ಪಕ್ಕದಲ್ಲಿ ಹಣ ಪತ್ತೆಯಾಗಿದೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚುತಜ್ಞರೊಂದಿಗೆ ವೃತ್ತ ನಿರೀಕ್ಷಕರಾದ ನೆಲವಾಗಲು ಮಂಜುನಾಥ ತಳಕು ಠಾಣಾ ಪಿ.ಎಸ್.ಐ ಕೆ.ಸತೀಶ ನಾಯ್ಕ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.