ಚಲಿಸುತ್ತಿದ್ದ ಲಾರಿಯ ಸ್ಟಿಯರಿಂಗ್ ತುಂಡಾಗಿ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು! | Janata news
ರಾಯಚೂರು : ಚಲಿಸುತ್ತಿದ್ದ ಲಾರಿ ಸ್ಟಿಯರಿಂಗ್ ತುಂಡಾದ ಪರಿಣಾಮ ಲಾರಿಯಲ್ಲಿದ್ದ ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾನವಿ ತಾಲೂಕಿನ ಕಲ್ಲೂರು ಸಮೀಪ ನಡೆದಿದೆ
ಚಾಲಕ ಸುರೇಶ್(40) ಮತ್ತು ಕ್ಲೀನರ್ ಮಾರಿಯಾ(30) ಮೃತಪಟ್ಟವರು. ಲಾರಿಯ ಸ್ಟೇರಿಂಗ್ ಕಟ್ಟಾಗಿ ರಸ್ತೆ ಪಕ್ಕಕ್ಕೆ ಲಾರಿ ಪಲ್ಟಿ ಹೊಡೆದಿದೆ.
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಕಲ್ಲೂರು ಸಮೀಪ ಕಾರಟಗಿಯಿಂದ ರಾಯಚೂರಿಗೆ ಲಾರಿಯೊಂದು ಭತ್ತದ ಕಟಾವು ಮಾಡುತ್ತಿದ್ದಂತ ಯಂತ್ರವೊಂದನ್ನು ಸಾಗಿಸುತ್ತಿತ್ತು. ಇಂತಹ ಲಾರಿಯ ಸ್ಟೀರಿಂಗ್ ಕಲ್ಲೂರು ಸಮೀಪ ಕಟ್ ಆಗಿದೆ.
ಇದರಿಂದಾಗಿ ಲಾರಿ ಮುಗುಚಿ ಬಿದ್ದ ಪರಿಣಾಮ, ಲಾರಿಯಲ್ಲಿದ್ದಂತ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಸಿರಿವಾರ ಠಾಣೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.