ಪಟ್ಟಣದೊಳಗೆ 6 ಕಾಡಾನೆಗಳ ಹಿಂಡು, ಜೋಳದ ಹೊಲದಲ್ಲಿ ಬೀಡುಬಿಟ್ಟ ಗಜಪಡೆ! | Janata news
ಹಾಸನ : ಜಿಲ್ಲೆಯ ಬೇಲೂರು ಪಟ್ಟಣದೊಳಗೆ 6 ಕಾಡಾನೆಗಳ ಹಿಂಡು ನುಗ್ಗಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಜೋಳದ ಹೊಲದಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಬೇಲೂರು ಪಟ್ಟಣಕ್ಕೆ ಎಂಟ್ರಿ ಕೊಟ್ಟಿರುವ ಗಜ ಪಡೆ, ಬೇಲೂರು ಸಮೀಪ ಜೋಳದ ಹೊಲದಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿದೆ. ಆ ಭಾಗದಲ್ಲಿ ಸಾಕಷ್ಟು ಬೆಳೆ ನಷ್ಟವಾಗಿದೆ.
ಕೆಲ ದಿನಗಳಿಂದ ತಾಲೂಕಿನ ವಿವಿಧೆಡೆ ಗಜಪಡೆ ಸಂಚರಿಸುತ್ತಿರೋದು ಕಂಡುಬಂದಿದೆ. ಸದ್ಯ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಮನೆಯಿಂದ ಯಾರೂ ಹೊರಬಾರದಂತೆ ಸೂಚನೆ ನೀಡಿದ್ದಾರೆ.
ಕೆಲ ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಆನೆ ಹಿಂಡು ಓಡಾಡುತ್ತಿದೆ. ಕೂಡಲೇ ಆನೆಗಳನ್ನ ಕಾಡಿಗೆ ಓಡಿಸಬೇಕು ಎಂದು ಜನ ಒತ್ತಾಯ ಮಾಡಿದ್ದಾರೆ.
English summary :Hasan