ಬೈಕ್ನಿಂದ ಬಿದ್ದು ಗೃಹಿಣಿ ಸಾವು, ಪತಿ ವಿರುದ್ಧ ಕೊಲೆ ಆರೋಪ! | Janata news
ದಾವಣಗೆರೆ : ಚಲಿಸುವ ಬೈಕ್ನಿಂದ ಬಿದ್ದು ಗೃಹಿಣಿಯೊಬ್ಬಳು ಸಾವಿಗೀಡಾಗಿರುವ ಘಟನೆ ಬಳ್ಳಾರಿಯ ಹರಪನಹಳ್ಳಿ ತಾಲೂಕಿನ ಕಂಚಿಕೇರಿಯಲ್ಲಿ ನಡೆದಿದೆ.
ಶಂಕ್ರಮ್ಮ (25) ಮೃತಪಟ್ಟ ಗೃಹಿಣಿ. ಬೈಕ್ನಲ್ಲಿ ದೇವಸ್ಥಾನಕ್ಕೆ ಹೋಗಿ ಬರುವಾಗ ನಡೆದ ಅಪಘಾತದಿಂದ ಶಂಕ್ರಮ್ಮನ ತಲೆಗೆ ಗಂಭೀರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತಮ್ಮ ಮಗಳ ಕೊಲೆ ಎಂದು ಶಂಕ್ರಮ್ಮನ ತವರು ಮನೆಯವರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.
English summary :Davanagere