ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕ್ರಿಸ್ಮಸ್ ಸಂಭ್ರಮಾಚರಣೆ
ಕಾರವಾರ : ಜಿಲ್ಲೆಯಾದ್ಯಂತ ಕ್ರೈಸ್ತ ಬಾಂದವರು ಸೋಮವಾರ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತರು ಸಡಗರದಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ಚರ್ಚ್ಗಳು ಹಾಗೂ ಕ್ರೈಸ್ತರ ಮನೆಗಳು ಅಲಂಕೃತವಾಗಿದ್ದವು. ಚರ್ಚ್ಗಳ ಅಂಗಳದಲ್ಲಿ ವಿಶೇಷವಾಗಿ ಏಸು ಹಾಗೂ ರಾಜರುಗಳ ಬೊಂಬೆಗಳನ್ನು ಜೋಡಿಸಿಡಲಾಗಿತ್ತು. ವಿವಿಧ ಚರ್ಚ್ನ ಧರ್ಮಗುರುಗಳು ರಾತ್ರಿ ಬಾಲ ಏಸುವನ್ನು ಗೋದಲಿಯಲ್ಲಿ ಇರಿಸಿ ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ಸೇರಿದ್ದ ನೂರಾರು ಕ್ರಿಶ್ಚಿಯನ್ ಸಮಜಬಾಂದವರು ಕ್ಯಾರಲ್ ಗೀತೆಗಳನ್ನು ಹಾಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ಬಳಿಕ ಪರಸ್ಪರ ಕೇಕ್ ಹಂಚಿ ಸಂಭ್ರಮಿಸಿದರು.
ಸಾಮರಸ್ಯ, ಸಹಬಾಳ್ವೆಯಿಂದ ಜೀವನ ನಡೆಸಿ ಎಂದು ಕ್ರಿಸ್ಮಸ್ ಹಬ್ಬದ ಪವಿತ್ರ ಸಂದೇಶದ ಕುರಿತು ಪ್ರವಚನ ನೀಡಲಾಯಿತು. ಸಮಾಜದಲ್ಲಿ ಎಲ್ಲರೂ ಸಾಮರಸ್ಯ, ಸಹಬಾಳ್ವೆಯಿಂದ ಜೀವನ ನಡೆಸಿದರೆ ಅದೇ ಮಾನವ ಜೀವನದ ಸಾರ್ಥಕತೆ. ಪ್ರೀತಿಯನ್ನು ಪ್ರತಿಯೊಬ್ಬರೂ ಹಂಚುವ ಜತೆಗೆ, ಸ್ನೇಹ-ಗೌರವವನ್ನು ಗಳಿಸಬೇಕು ಎಂದು ಸಂದೇಶ ನೀಡಿದರು.
ಮನೆಯಲ್ಲಿ ಮಾಡಿದ ಚಕ್ಕುಲಿ, ನವರಿ, ತರಹೇವಾರಿ ತಿಂಡಿಗಳನ್ನು ನೆರೆಹೊರೆ ಹಾಗೂ ಸಂಬಂಧಿಕರಿಗೆ ನೀಡಿ ಪರಸ್ಪರ ಹಬ್ಬದ ಶುಭಾಶಯ ಹಂಚಿಕೊಂಡರು.