ಡಿಕೆಎಸ್ಗೆ ಮೀರ್ ಸಾದಿಕ್ ಎಂದ ಡಿಸಿಎಂ ವಿರುದ್ಧ ಡಿ.ಕೆ. ಸುರೇಶ್ ತೀವ್ರ ಆಕ್ರೋಶ | Janata news
ಬೆಂಗಳೂರು : ಡಿಸಿಎಂ ಅಶ್ವತ್ಥ್ ನಾರಾಯಣ್ ಡಿ.ಕೆ. ಶಿವಕುಮಾರ್ ಅವರನ್ನು ಮೀರ್ ಸಾದಿಕ್ ಎಂದ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಡಿ.ಕೆ. ಸುರೇಶ್ ಅಶ್ವತ್ಥ್ ನಾರಾಯಣ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇಷ್ಟು ದಿನ ಡಿಸಿಎಂ ಎಂದು ಗೌರವ ಕೊಟ್ಟು ನಾನು ಸುಮ್ನಿದ್ದೆ. ಅವನು ನಾಲಗೆ ಬಿಗಿ ಹಿಡಿದು ಮಾತನಾಡಲಿ ಎಂದು ಡಿ.ಕೆ.ಶಿವಕುಮಾರ್ರನ್ನ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಮೀರ್ ಸಾದಿಕ್ಗೆ ಹೋಲಿಕೆ ಮಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷರ ಸಹೋದರ ಸಂಸದ ಡಿ.ಕೆ.ಸುರೇಶ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಹೊರಟಿರುವ ಮೀರ್ ಸಾದಿಕ್ ಕೂಡ ಈತನೆ. ಈತನ ಹೆಸರನ್ನು ನಾನು ಹೇಳಲ್ಲ. ಮೀರ್ ಸಾದಿಕ್ ತನ ಬಿಜೆಪಿಯವರಿಗೆ ಸಂಬಂಧಿಸಿದ್ದೇ ಹೊರತು ಡಿಕೆಶಿ ಗಲ್ಲ. ಸಿಎಂ ಸ್ಥಾನದಿಂದ ಬಿಎಸ್ವೈನ ಇಳಿಸಲು ಹಿಂಬಾಗಿಲಿಂದ ಯತ್ನ ನಡೆಸಲಾಗುತ್ತಿದೆ. ಯಾರು ಯಾರ ಮನೆ ಬಾಗಿಲು ತಟ್ಟುತ್ತಿದ್ದಾರೆಂದು ಗೊತ್ತಿದೆ. ಹಾಗಾಗಿ, ಮೀರ್ ಸಾದಿಕ್ ಯಾರೆಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಸುರೇಶ್ ತಿರುಗೇಟು ನೀಡಿದ್ದಾರೆ.
ನಾಳೆ ಬೆಳಗ್ಗೆ ಬಿಡಲಿ ಬೇಕಿದರೆ ಆಡಿಯೋವನ್ನು, ಅದೇನು ಡಬ್ಬಾ ಬಿಡೋದಕ್ಕೆ ಚಿತ್ರ ಕೆಟ್ಟೋಯ್ತಾ ಎಂದು ಹರಿಹಾಯ್ದರು. ಚಿಕ್ಕ ವಯಸ್ಸಲ್ಲಿ ಬಿಜೆಪಿಯವರು ಏನೋ ಅವಕಾಶ ಕೊಟ್ಡಿದ್ದಾರೆ. ಯಡಿಯೂರಪ್ಪ ಇಳಿಸೋದಕ್ಕೆ ಮೀರ್ ಸಾದಕ್ ತನ ಮಾಡಿ ಮಾಧ್ಯಮದ ಮುಂದೆ ಪ್ರಾಮಾಣಿಕ ಫೋಸ್ ಕೊಡುತ್ತಾನೆ.
ಬೆಂಗಳೂರು ಹಣವನ್ನು ಲೂಟಿ ಹೊಡೆದಿದ್ದಾರೆ. ಇವರು ಲೂಟಿ ಹೊಡೆಯೋದು, ಬೇಕಿದರೆ ನಿಮ್ಮ ಜೀವ ನೀವೇ ಉಳಿಸಿಕೊಳ್ಳಿಅಂತ ಜನರಿಗೆ ಹೇಳೋದು. ಕೇಂದ್ರದಿಂದ ಒಂದೇ ಒಂದು ಪರಿಹಾರ ತರೋ ಯೋಗ್ಯತೆ ಇಲ್ಲ ಇವರಿಗೆ. ಬರೀ ಲೂಟಿಕೋರರು ಎಂದು ಉಪಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಅಶ್ವಥ್ ನಾರಾಯಣ ದೇವರ ಮುಂದೆ ಪ್ರಮಾಣ ಮಾಡ್ಲಿ, ಡಿ.ಕೆ. ಶಿವಕುಮಾರ್ಗೆ ಪ್ರಮಾಣ ಮಾಡುವಂತೆ ಕೇಳಲು ಇವನಿಗೆ ಯಾವ ಯೋಗ್ಯತೆ ಇದೆ.? ಅವನಿಗೆ ಮಾನ ಮರ್ಯಾದೆ ಇದೀಯಾ, ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಡಿಸಿಎಂಗೆ ಮಾತಿನ ಮೂಲಕವೇ ಸಂಸದ ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆದು ಬೇಕಿದ್ರೆ ನಿಮ್ಮ ಜೀವ ನೀವೇ ಉಳಿಸಿಕೊಳ್ಳಿರೆಂದು ಹೇಳುತ್ತಾರೆ. ಇವರಿಗೆ ಕೇಂದ್ರದಿಂದ ಪರಿಹಾರ ತರುವ ಯೋಗ್ಯತೆಯೇ ಇಲ್ಲ. ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆಯುವುದೇ ಕಾಯಕ. ಇದೊಂದು ಲೂಟಿಕೋರರ ಸರ್ಕಾರವೆಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.