ದೇಶದ್ರೋಹದ ಹೇಳಿಕೆ : ಮೆಹಬೂಬ ಮುಫ್ತಿ ಬಂಧನಕ್ಕೆ ಬಿಜೆಪಿ ಒತ್ತಾಯ | Janata news
ಶ್ರೀನಗರ : ದೇಶದ್ರೋಹದ ಹೇಳಿಕೆ ನೀಡಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಅವರನ್ನು ಬಂಧಿಸುವಂತೆ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಘಟಕ ಒತ್ತಾಯಿಸಿದೆ.
ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹೂಬಾ ಮುಫ್ತಿ, ಆರ್ಟಿಕಲ್ 370 ರದ್ಧುಗೊಂಡ ಬಳಿಕ ಸಂಭವಿಸಿದ ತಮ್ಮ 14 ತಿಂಗಳ ಬಂಧನದಿಂದ ಬಿಡುಗಡೆಯಾದ ನಂತರ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತದ ತ್ರಿವರ್ಣ ಧ್ವಜದ ಬಗ್ಗೆ, ನೀಡಿದ ಹೇಳಿಕೆಯ ಕೆಲವೇ ಗಂಟೆಗಳ ನಂತರ, ಬಿಜೆಪಿ ಈ ಹೇಳಿಕೆಯನ್ನು, ದೇಶದ್ರೋಹಿ ಹೇಳಿಕೆ, ನೀಡಿದೆ ಎಂದು ಆರೋಪಿಸಿದೆ.
ಬಂಧನ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೆಹಬೂಬ ಮುಪ್ತಿ, ಜಮ್ಮು ಮತ್ತು ಕಾಶ್ಮೀರದ ಬಾವುಟವನ್ನು ಮತ್ತೆ ಹಾರಿಸಲು ಅವಕಾಶ ಸಿಕ್ಕಬಳಿಕವಷ್ಟೇ ರಾಷ್ಟ್ರೀಯ ಧ್ವಜವನ್ನು ಹಾರಿಸುವುದಾಗಿ ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮೆಹಬೂಬಾ ಮುಫ್ತಿ ಅವರ ದೇಶದ್ರೋಹಿ ಟೀಕೆಗಳನ್ನು ಗಮನಿಸಿ, ದೇಶದ್ರೋಹಿ ಕೃತ್ಯಕ್ಕಾಗಿ ಬುಕ್ ಮಾಡಿ ಮತ್ತು ಅವರನ್ನು ಕಂಬಿಗಳ ಹಿಂದೆ ಇರಿಸಿ, ಎಂದು ಒತ್ತಾಯಿಸಿದ್ದಾರೆ.
ನಮ್ಮ ರಕ್ತದ ಪ್ರತಿಯೊಂದು ಹನಿಗಳನ್ನು ನಮ್ಮ ಧ್ವಜ, ದೇಶ ಮತ್ತು ತಾಯಿನಾಡುಗಾಗಿ ತ್ಯಾಗ ಮಾಡುತ್ತೇವೆ. ಜಮ್ಮು ಮತ್ತು ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗವಾಗಿದೆ, ಆದ್ದರಿಂದ ಕೇವಲ ಒಂದು ಧ್ವಜವನ್ನು ಮಾತ್ರ ಹಾರಿಸಬಹುದು ... ಮತ್ತು ಅದು ನಮ್ಮ ರಾಷ್ಟ್ರಧ್ವಜ ಮಾತ್ರ, ಎಂದು ಅವರು ಹೇಳಿದ್ದಾರೆ, ಎಂದು ಪಿಟಿಐ ವರದಿ ಮಾಡಿದೆ.