ದೆವ್ವ ಬಿಡಿಸುವ ನೆಪದಲ್ಲಿ ಯುವತಿಯ ಬೆತ್ತಲೆ ದೃಶ್ಯ ವಿಡಿಯೋ ಮಾಡಿ ಬೆದರಿಕೆ! | Janata news
ಚಿತ್ರದುರ್ಗ : ದೆವ್ವ ಬಿಡಿಸುವ ನೆಪದಲ್ಲಿ ಮಂತ್ರವಾದಿಯ ಪುತ್ರನೊಬ್ಬ ಯುವತಿಯ ಬೆತ್ತಲೆ ದೃಶ್ಯವನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ತಡವಾಗಿ ಬೆಳಕಿ ಬಂದಿದೆ.
ಚಳ್ಳಕೆರೆ ತಾಲೂಕಿನ ಭರಮಸಾಗರ ಗ್ರಾಮದಲ್ಲಿ ಸಂಭವಿಸಿದ್ದು, ಆರೋಪಿ ವಿರುದ್ಧ ಎಸ್ಪಿಗೆ ಸಂತ್ರಸ್ತ ಯುವತಿ ದೂರು ನೀಡಿದ್ದಾರೆ.
ಮಂತ್ರವಾದಿ ಶರಣಪ್ಪ ಮತ್ತು ಈತನ ಪುತ್ರ ಭಾಸ್ಕರ್ ಆರೋಪಿಗಳು. , ದೆವ್ವ ಬಿಡಿಸುವ ನೆಪದಲ್ಲಿ 19 ವರ್ಷದ ಯುವತಿಗೆ, ನೀರಿನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕೊಟ್ಟು ಕುಡಿಸಿ, ಆಕೆಯ ಪ್ರಜ್ಞೆ ತಪ್ಪಿಸಿ ಅಶ್ಲೀಲ ವಿಡಿಯೋ ಮಾಡಿರುವ ಭಾಸ್ಕರ್ ಎಂಬ ಯುವಕ ನಂತರ ಯುವತಿಗೆ ಬೆದರಿಕೆ ಒಡ್ಡಲು ಆರಂಭಿಸಿದ್ದಾನೆ.
ಆಕೆಗೆ ಆ ವಿಡಿಯೋ ತೋರಿಸಿ ಬೆದರಿಸಿ, ಯುವತಿಯನ್ನು ವಿವಾಹ ಕೂಡ ಆಗಿದ್ದಾನೆ.
ಭಾಸ್ಕರ್ ಅಶ್ಲೀಲ ಫೋಟೊ ವಿಡಿಯೋ ತೋರಿಸಿ ಹೇಳಿದಂತೆ ಕೇಳದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಯುವತಿಯನ್ನು ಪಾವಗಡಕ್ಕೆ ಕರೆದೊಯ್ದು ಮದುವೆ ಮಾಡಿಕೊಂಡಿದ್ದಾನೆ. ಐದು ತಿಂಗಳ ಹಿಂದೆ 14 ವರ್ಷದ ಅಪ್ರಾಪ್ತೆಯನ್ನು ಭಾಸ್ಕರ್ ವಿವಾಹವಾಗಿ, ತನ್ನನ್ನೂ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.