ಜೆಡಿಎಸ್ ಬಹಿರಂಗ ಸಮಾವೇಶದಲ್ಲಿ ಕುಸಿದು ಬಿದ್ದ ಶಿರಾ ಜೆಡಿಎಸ್ ಅಭ್ಯರ್ಥಿ! | Janata news
ತುಮಕೂರು : ಶಿರಾ ಉಪಚುನಾವಣೆ ಹಿನ್ನೆಲೆ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಜೆಡಿಎಸ್ಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಇದೇ ವೇಳೆ ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಬಹಿರಂಗ ಸಮಾವೇಶದಲ್ಲಿ ಕುಸಿದು ಬಿದ್ದಿದ್ದಾರೆ.
ನನ್ನ ಪತಿಯ ಅಕಾಲಿಕ ನಿಧನದಿಂದಾಗಿ ನೋವು ತಂದಿದೆ. ಸೆರಗೊಡ್ಡಿ ಬೇಡುತ್ತೇನೆ ನನಗೆ ಮತನೀಡಿ ಗೆಲ್ಲಿಸಿ. ಕ್ಷೇತ್ರದ ಅಭಿವೃದ್ಧಿಯನ್ನು ತಾವು ಮಾಡುವುದಾಗಿ ಹೇಳಿದ್ದರು. ಇದಾದ ಬಳಿಕ ದೇವೇಗೌಡರು ಮಾತನಾಡುತ್ತಿದ್ದ ವೇಳೆ ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಬಹಿರಂಗ ಸಮಾವೇಶದಲ್ಲಿ ದಿಢೀರನೆ ಕುಸಿದು ಬಿದ್ದರು. ಲೋ ಬಿಪಿಯಿಂದಾಗಿ ಅಮ್ಮಾಜಮ್ಮ ಅಸ್ವಸ್ಥರಾಗಿದ್ದಾರೆ ಎನ್ನಲಾಗ್ತಿದೆ.
ಅಮ್ಮಾಜಮ್ಮ ಇತ್ತೀಚೆಗೆ ಕೊರೊನಾದಿಂದ ಗುಣಮುಖರಾಗಿದ್ದರು. ಸುಸ್ತಾಗಿ ತಲೆಸುತ್ತಿ ಕುಸಿದುಬಿದ್ದ ಅಮ್ಮಾಜಮ್ಮರನ್ನು ತಕ್ಷಣ ಅವರ ಮಗ ಸತ್ಯನಾರಾಯಣ ಆಸ್ಪತ್ರೆಗೆ ಕರೆದೊಯ್ದರು.
ಇನ್ನು ಈ ಸಮಾವೇಶದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಸೇರಿದಂತೆ ಇನ್ನೂ ಹಲವು ಜೆಡಿಎಸ್ ಮುಖಂಡು ಭಾಗಿಯಾಗಿದ್ದರು.