ಅತ್ತೆ, ಮಾವ, ಪತ್ನಿ, ಪ್ರಿಯಕರನ ಕಾಟ: ಬೇಸತ್ತ ಪತಿ ಸೆಲ್ಪಿ ವಿಡಿಯೋಮಾಡಿ ಆತ್ಮಹತ್ಯೆ! | Janata news
ತುಮಕೂರು : ತನ್ನ ಹೆಂಡ್ತಿ, ಅತ್ತೆ ಮಾವನ ಹಿಂಸೆ ತಾಳಲಾರದೆ ವ್ಯಕ್ತಿಯೊಬ್ಬ ಕೀಟನಾಶಕ ಸೇವಿಸಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ರಂಗನಹಳ್ಳಿ ಬೋವಿ ಕಾಲೋನಿಯಲ್ಲಿ ನಡೆದಿದೆ.
ಲೋಕೇಶ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಸೆಲ್ಫಿ ವೀಡಿಯೋ ಮಾಡಿ ಕೀಟನಾಶಕ ಸೇವಿಸಿ ಆತ್ಮಹತೆಗೆ ಶರಣಾಗಿದ್ದಾನೆ.
ತನ್ನ ಸಾವಿಗೆ ಹೆಂಡ್ತಿ ಹೇಮಾ, ಅತ್ತೆ ಧನಲಕ್ಷ್ಮಿ, ಮಾವ ರಾಜು ಹಾಗೂ ಹೆಂಡತಿಯ ಪ್ರಿಯಕರ ಚೇತನ್ ಕಾರಣ ಅಂತಾ ತಿಳಿಸಿದ್ದಾನೆ. ಪುಢಾರಿ ರಾಜಕೀಯದವರನ್ನ ಕರೆದುಕೊಂಡು ಬಂದು ಚಿತ್ರಹಿಂಸೆ ನೀಡ್ತಾರೆ. ನೀನು ಗಂಡಸು ಅಲ್ಲ ಅಂತಾ ಮನಬಂದಂತೆ ಕಿರುಕುಳ ನೀಡುತ್ತಿದ್ದರು ಎಂದು ತನ್ನ ಅಳಲು ತೊಡಿಕೊಂಡಿದ್ದಾನೆ. ಇದಕ್ಕೆ ಬೇಸತ್ತು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಆತ ತಿಳಿಸಿದ್ದಾನೆ.
ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.