ಜಮ್ಮು ಮತ್ತು ಕಾಶ್ಮೀರ ಎನ್ಕೌಂಟರ್ : 4 ಉಗ್ರರನ್ನು ತಟಸ್ಥಗೊಳಿಸಿ, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಭದ್ರತಾ ಪಡೆ | Janata news
ನಾಗ್ರೋಟಾ : ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯಲ್ಲಿ ಗುರುವಾರ ನಸುಕಿನ ಜಾವ ಜಮ್ಮುವಿನ ನಾಗ್ರೋಟಾದ ಬಾನ್ ಟೋಲ್ ಪ್ಲಾಜಾ ಬಳಿ ಭಾರತ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಘರ್ಷಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ.
ವರದಿಗಳ ಪ್ರಕಾರ, ಭಯೋತ್ಪಾದಕರು ಟ್ರಕ್ ವೊಂದರಲ್ಲಿ ಜಮ್ಮುವಿನಿಂದ ಕಾಶ್ಮೀರಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದರು. ವಿಷಯ ತಿಳಿಯುತ್ತಿದ್ದಂತೆ ಭಯೋತ್ಪಾದಕರನ್ನು ಭದ್ರತಾ ಪಡೆ ಸುತ್ತುವರೆದು, ಶರಣಾಗುವಂತೆ ಎಚ್ಚರಿಕೆ ನೀಡಲಾಗಿದೆ. ಸಿಕ್ಕಿಬಿದ್ದ ಉಗ್ರರು ಶರಣಾಗತಿಯ ಬದಲು ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಸಶಸ್ತ್ರ ಪಡೆ ಯೋಧರು ನಡೆಸಿದ ಪ್ರತಿ ಗುಂಡಿನ ದಾಳಿಗೆ ಭಯೋತ್ಪಾದಕರು ಸಾವನಪ್ಪಿದ್ದಾರೆ.
ಈ ಎನ್ಕೌಂಟರ್ ನಲ್ಲಿ ಉಗ್ರರಿಂದ 11 ಎಕೆ ರೈಫಲ್ಸ್, 3 ಪಿಸ್ತೂಲ್ ಮತ್ತು 29 ಗ್ರೆನೆಡೆಸ್. ಇಂಪ್ ಆರ್ಡಿಎಕ್ಸ್ ಮತ್ತು ಪಾಕಿಸ್ಥಾನ ನಿರ್ಮಿತ ಔಷಧಿಗಳನ್ನು ವಶಕ್ಕೆ ಪಡೆಯಲಾಗಿದೆ. ಶಸ್ತ್ರಾಸ್ತ್ರಗಳ ದೊಡ್ಡ ಸಂಗ್ರಹವನ್ನು ವಶಕ್ಕೆ ಪಡೆದ ಕಾರಣದಿಂದ ಉಗ್ರ ಸಂಘಟನೆಯಲ್ಲಿ ಶಸ್ತ್ರಾಸ್ತ್ರಗಳ ಕೊರತೆಯನ್ನು ಸಹ ಸೂಚಿಸುತ್ತದೆ. ಹೊಸದಾಗಿ ಒಳನುಸುಳಿರುವ ಜೈಶ್ ಭಯೋತ್ಪಾದಕ ಗುಂಪು ಜಮ್ಮು ಕಾಶ್ಮೀರದ ಡಿಡಿಸಿ ಚುನಾವಣೆಯನ್ನು ಗುರಿಯಾಗಿಸಲು ಯೋಜಿಸುತ್ತಿತ್ತು, ಎನ್ನಲಾಗಿದೆ.
ಡಿಜಿಪಿ ಜಮ್ಮು ಕಾಶ್ಮೀರ ಪೊಲೀಸ್ ದಿಲ್ಬಾಗ್ ಸಿಂಗ್ ಘಟನೆಯನ್ನು ದೃಡಿಕರಿಸಿದ್ದು, ಜೈಶ್ ಎ ಮೊಹಮ್ಮದ್ ಗುಂಪಿನೊಂದಿಗೆ ಸಂಬಂಧ ಹೊಂದಿದ್ದ ಭಯೋತ್ಪಾದಕರು ನಾಗ್ರೋಟಾ ಬಳಿಯ ಜಮ್ಮು-ಕಾಶ್ಮೀರ ಹೆದ್ದಾರಿಯಲ್ಲಿರುವ ಬಾನ್ ಟೋಲ್ ಪ್ಲಾಜಾದಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಅವರು ಸಾಂಬಾ ವಲಯದಿಂದ ಒಳನುಸುಳಿದ್ದರು, ಎಂದು ತಿಳಿಸಿದ್ದಾರೆ.
ಗುಂಡಿನ ಕಾಳಗದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಎಸ್ಒಜಿ ಯ ಇಬ್ಬರು ಯೋಧರು ಗಾಯಗೊಂಡಿದ್ದಾರೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಪ್ರಾರಂಭವಾದ ಗುಂಡಿನ ಚಕಮಕಿಯಿಂದ ಜಮ್ಮು-ಶ್ರೀನಗರ ಹೆದ್ದಾರಿಯನ್ನು ಕೆಲಕಾಲ ಮುಚ್ಚಲಾಗಿತ್ತು.