ಡಿಕೆಶಿ ಮಗಳ ನಿಶ್ಚಿತಾರ್ಥ: ಬಿಎಸ್ವೈ, ಅಶೋಕ್ ಭಾಗಿ! ಐಶ್ವರ್ಯಾ-ಅಮರ್ತ್ಯ ಹೆಗ್ಢೆ ನಿಶ್ಚಿತಾರ್ಥದ ಚಿತ್ರಗಳು..! | Janata news
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಪುತ್ರ ಅಮರ್ಥ್ಯ ಸುಬ್ರಮಣ್ಯ ಹೆಗ್ಡೆ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆಯುತ್ತಿದ್ದು ಬಿಎಸ್ವೈ, ಅಶೋಕ್ ಭಾಗಿಯಾಗಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಕೂಡ ನೂತನ ಜೋಡಿಗೆ ಶುಭಹಾರೈಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಹಾಗೂ ಸಿಸಿಡಿ ಸಂಸ್ಥಾಪಕ ಅಮರ್ತ್ಯ ಹೆಗ್ಡೆ ನಿಶ್ಚಿತಾರ್ಥ ಇಂದು ನಡೆದಿದೆ. ನಗರದ ಪಂಚತಾರ ಹೊಟೇಲ್ನಲ್ಲಿ ನಡೆದ ಈ ಸಮಾರಂಭಕ್ಕೆ ಆಪ್ತ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿದೆ.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದೆ. ಆಯ್ದ ಗಣ್ಯರು ಹಾಗೂ ಕುಟುಂಬಸ್ಥರು, ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿದ್ದು, ಒಟ್ಟು 250 ಜನರನ್ನು ಆಹ್ವಾನಿಸಲಾಗಿದೆ.
ಬೇಬಿ ಪಿಂಕ್ ಲೆಹೆಂಗಾದಲ್ಲಿ ಐಶ್ವರ್ಯಾ ಕಂಗೊಳಿಸಿದರೆ, ತಿಳಿ ಗುಲಾಬಿ ಬಣ್ಣದ ಶೆರ್ವಾನಿಯಲ್ಲಿ ಅಮರ್ತ್ಯ ಮಿಂಚಿದ್ದಾರೆ.