ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗಾಗಿ ಗೃಹ ಮಂತ್ರಿ ಅಮಿತ್ ಶಾ ಚೆನ್ನೈಗೆ : ರಾಜ್ಯ ರಾಜಕೀಯದಲ್ಲಿ ಸಂಚಲನ | Janata news
ಚೆನ್ನೈ : ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಲನೆ ನೀಡಲು ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಚೆನ್ನೈ ತಲುಪಿದ್ದಾರೆ. ಬಿಜೆಪಿ ಪಕ್ಷದ ರಾಷ್ಟೀಯ ನಾಯಕರ ತಮಿಳುನಾಡು ಪ್ರವಾಸ ಅನೇಕ ಉಹಪೋಹಗಳನ್ನು ಸೃಷ್ಟಿ ಮಾಡಿದ್ದು, ರಾಜ್ಯದ ಬಿಜೆಪಿ ಮುಖಂಡರಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ಶಾ ಅವರ ಕಚೇರಿಯಿಂದ ಬಿಡುಗಡೆಯಾದ ಅವರ ಚೆನ್ನೈ ಪ್ರವಾಸದ ನಿಗದಿಪಡಿಸಿದ ಕಾರ್ಯಕ್ರಮಗಳ ಪ್ರಕಾರ, ಗೃಹ ಸಚಿವರು ಮೊದಲು ಎಂ.ಜಿ.ರಾಮಚಂದ್ರನ್ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಿಗೆ ಸಂಜೆ 4:30 ಕ್ಕೆ ಹೂವಿನ ಗೌರವ ಸಲ್ಲಿಸಲಿದ್ದಾರೆ. ಬಳಿಕ, ಚೆನ್ನೈ ಮೆಟ್ರೋ ರೈಲಿನ 2ನೇ ಹಂತದ ಕಾಮಗಾರಿ ಸೇರಿದಂತೆ 67,000 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಾ ಉದ್ಘಾಟನೆ ಮತ್ತು ಅಡಿಪಾಯ ಹಾಕಲಿದ್ದಾರೆ.
ಅಂತಿಮವಾಗಿ, ಅವರು ಸಂಜೆ 6 ಗಂಟೆಗೆ ತಮಿಳುನಾಡಿನ ಭಾರತೀಯ ಜನತಾ ಪಕ್ಷದ(ಬಿಜೆಪಿ) ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರನ್ನು ಭೇಟಿಮಾಡಿ ಸಭೆ ನಡೆಸಲಿದ್ದಾರೆ. ಅಮಿತ್ ಶಾ ಅವರ ಈ ಭೇಟಿ ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ಚುನಾವಣೆಯ ಕುರಿತು ಕಾರ್ಯತಂತ್ರ ಕಾರ್ಯತಂತ್ರ ರೂಪಿಸುವಲ್ಲಿ ಹಾಗೂ ಪಕ್ಷ ಸಂಘಟನೆಗೆ ಅಡಿಪಾಯ ಎಂಬಂತೆ ಬಿಂಬಿಸಲಾಗಿದೆ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಡಿಎಂಕೆ ಮಾಜಿ ಸಂಸದ ಕೆ.ಪಿ.ರಾಮಲಿಂಗಂ ಬಿಜೆಪಿ ಸೇರ್ಪಡೆಯಾಗಿದ್ದು ವಿರೋಧ ಪಾಳಯದಲ್ಲಿ ತಳಮಳಕ್ಕೆ ಕಾರಣವಾಗಿದೆ.
ಅಮಿತ್ ಶಾ ಅವರನ್ನು ವಿಮಾನ ನಿಲ್ದಾಣದಲ್ಲಿ, ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಡಿಸಿಎಂ ಪನ್ನೀರ್ ಸೆಲ್ವಂ, ಹಿರಿಯ ಕ್ಯಾಬಿನೆಟ್ ಸದಸ್ಯರು ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಎಲ್.ಮುರುಗನ್ ಇನ್ನಿತರರು ಸ್ವಾಗತಿಸಿದರು.
ಶಾ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬೆಳಿಗ್ಗೆಯಿಂದ ಕಾಯುತ್ತಿದ್ದ ಬೆಂಬಲಿಗರತ್ತ ಅತಿಯಾದ ಸಂತೋಷ ಹಾಗೂ ಉತ್ಸಾಹದಿಂದ ಕೈಬಿಸಿ, ಕೈಮುಗಿದು ಅಬಿನಂಧಿಸಿದರು. ಜಿಎಸ್ಟಿ ರಸ್ತೆಯಲ್ಲಿ ಶಾ ನಡೆಯುತ್ತಿರುವ ವಿಡಿಯೋವನ್ನು ಅವರ ಅಧಿಕೃತ ಸಾಮಾಜಿಕ ಮಾದ್ಯಮ ಖಾತೆಯಲ್ಲಿ ಪ್ರಕಟಿಸಲಾಗಿದೆ.
ವಿಮಾನ ನಿಲ್ದಾಣದಿಂದ ಶಾ ಅವರ ಬೆಂಗಾವಲು ಹೊರಗೆ ಬರುತ್ತಲೇ, ಗೃಹ ಸಚಿವರು ಪ್ರೋಟೋಕಾಲ್ ಅನ್ನು ಲೆಕ್ಕಿಸದೇ, ತಮ್ಮ ವಾಹನದಿಂದ ಕೆಳಗಿಳಿದು, ಬಿಡುವಿಲ್ಲದ ಜಿಎಸ್ಟಿ ರಸ್ತೆಯಲ್ಲಿ ನಡೆಯುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ.
It is always great to be in Tamil Nadu. Thank you Chennai for this love and support. https://t.co/pxl5EaZ6on
— Amit Shah (@AmitShah) November 21, 2020