ದನದ ಚರ್ಮ ಸಾಗಾಟ : ವಾಹನ ಸಮೇತ ಚಾಲಕ ಪೋಲೀಸರ ವಶಕ್ಕೆ
ಭಟ್ಕಳ : ಧನದ ಚರ್ಮ ವಾಹನದಲ್ಲಿ ಸಾಗಿಸುವಾಗ ಪೋಲೀಸರ ಅಥಿತಿಯಾದ ಘಟನೆ ಮುರ್ಡೇಶ್ವರ ಸಮೀಪ ನಡೆದಿದೆ. ಭಟ್ಕಳದಿಂದ ಹೊನ್ನಾವರ ಮಾರ್ಗವಾಗಿ ಧನದ ಚರ್ಮ ಸಾಗಿಸುತ್ತಿದ್ದ ವೇಳೆ ಮುರ್ಡೇಶ್ವರದ ಬಸ್ತಿ ಸಮೀಪ ವಾಹನ ಪಂಚರ್ ಆಗಿ ನಿಂತಿದ್ದು ಸಾರ್ವಜನಿಕರು ಗಮನಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ಆರಕ್ಷಕರು ಸ್ಥಳಕ್ಕಾಗಮಿಸಿ ವಾಹನ ಸಮೇತ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಧನದ ಚರ್ಮವನ್ನು ಭಟ್ಕಳದಿಂದ ಧಾರವಾಡಕ್ಕೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ವಾಹನ ಚಾಲಕ ಮುರುಡೇಶ್ವರ ಪೋಲೀಸರ ವಶದಲ್ಲಿದ್ದು, ಹೆಚ್ಚಿನ ಮಾಹಿತಿ ಪೋಲೀಸರ ತನಿಖೆಯಿಂದ ತಿಳಿದುಬರಬೇಕಿದೆ.
English summary :