ಕಂಟೇನರ್ ಲಾರಿಗೆ ಕಾರ್ ಡಿಕ್ಕಿ: ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣ ಸಾವು! | Janata news
ಹಾವೇರಿ : ಕಂಟೇನರ್ ಲಾರಿಗೆ ಕಾರ್ ಡಿಕ್ಕಿಯಾದ ಪರಿಣಾಮ ಗಾಡಿಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ಹೊರವಲಯದಲ್ಲಿ ನಡೆದಿದೆ.
ಹನುಮಂತಪ್ಪ (65), ಗೀತಾ (55) ಮತ್ತು ಶಿವಾನಿ (10) ಮೃತರು. ಗಾಯಾಳು ರೇಣುಕಾರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಹರಿಹರ ತಾಲೂಕಿನ ಕುಂಬಳೂರು ಗ್ರಾಮದ ನಿವಾಸಿಗಳು.
ಮದುವೆಗೆಂದು ಹುಬ್ಬಳ್ಳಿಗೆ ಹೋಗಿ ಹರಿಹರಕ್ಕೆ ಮರಳಿ ಬರುವಾಗ ಅಪಘಾತ ಸಂಭವಿಸಿದೆ. ಕಾರು ಚಾಲಕನ ಅತಿವೇಗವೇ ಘಟನೆಗೆ ಕಾರಣ ಎನ್ನಲಾಗಿದೆ. ಪಿಎಸ್ಐ ಮಂಜುನಾಥ ಮತ್ತು ಸಿಪಿಐ ಭಾಗ್ಯವಂತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
English summary :Haveri