ನಾನು ರಾತ್ರಿ ವೇಳೆ ಬಿಎಸ್ವೈ ಅವರನ್ನು ಭೇಟಿ ಮಾಡಿಲ್ಲ, ಮಧ್ಯರಾತ್ರಿ ಸಿಎಂ ಬಳಿ ಹೋಗಿದ್ದನ್ನು ಸಾಬೀತು ಮಾಡಿ! | Janata news
ಬೆಂಗಳೂರು : ಮಧ್ಯರಾತ್ರಿ ವೇಳೆ ನಾನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಪುಟ ಸಹೋದ್ಯೋಗಿಗಳನ್ನು ಭೇಟಿ ಮಾಡಿಲ್ಲ. ಹಾಗೇನಾದರೂ ಅವರನ್ನು ನಾನು ಭೇಟಿ ಮಾಡಿದ್ದನ್ನು ಸಾಬೀತು ಪಡಿಸಿದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ.
ಯಡಿಯೂರಪ್ಪ ಅವರೇ ಸದನದಲ್ಲಿ ಹಲವು ಬಾರಿ ಹೇಳಿದ್ದಾರೆ. ಮಧ್ಯರಾತ್ರಿ ಬಂದು ಕೆಲಸ ಮಾಡಿಸಿಕೊಂಡು ಹೋಗಿದ್ದೀರಿ ಎಂದು, ಡಿಕೆ ಶಿವಕುಮಾರ್ ಅವರನ್ನು ಉದ್ದೇಶಿಸಿ ಯಡಿಯೂರಪ್ಪ ಅವರೇ ಹೇಳಿದ್ದು, ನಾನು ರಾಜ್ಯದ ಮುಖ್ಯಮಂತ್ರಿಗಳನ್ನು ಪಕ್ಷದ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ಭೇಟಿ ಮಾಡುತ್ತೇವೆ ವಿನಃ ವೈಯಕ್ತಿಕ ತೆವಲಿಗೆ ಅಲ್ಲ ಎಂದರು.
ಕೋಲಾರದಲ್ಲಿ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಎಚ್ಡಿಕೆ ಮಾತನಾಡುತ್ತ, ಕಾಂಗ್ರೆಸ್ ತರಹ ನಾವು ಡಬಲ್ ಗೇಮ್ ರಾಜಕೀಯ ಮಾಡಲ್ಲ. ಈಗ ಕಾಂಗ್ರೆಸ್ ಶಾಲಿಗೂ ಬೆಲೆಯಿಲ್ಲ, ಹಾಗಾಗಿ ಹಸಿರು ಶಾಲು ಹಾಕಿಕೊಂಡು ಹೋಗಿದ್ದಾರೆ.
ರೈತರನ್ನು ಉಳಿಸಿಕೊಳ್ಳಲು ನಮ್ಮ ಪಕ್ಷದಿಂದ ಬಳುವಳಿ ಕೊಟ್ಟಿದ್ದೇವೆ. ಹೋರಾಟ ಮಾಡೋದ್ರಿಂದ ಎಲ್ಲ ಸಮಸ್ಯೆ ಬಗೆಹರಿಯಲ್ಲ, ನಾನು ಬಿಜೆಪಿಗೆ ಹತ್ತಿರವಾಗಿಲ್ಲ, ಸಾಫ್ಟ್ ಕಾರ್ನರ್ ಇಟ್ಟುಕೊಂಡಿಲ್ಲ ಎಂದಿದ್ದರು. ನಾನು ಹಗಲು ವೇಳೆ ಸಿಎಂ ಯಡಿಯೂರಪ್ಪರನ್ನ ಭೇಟಿ ಮಾಡಿದ್ದೆ.
ಆದ್ರೆ ಕಾಂಗ್ರೆಸ್ನಂತೆ ರಾತ್ರಿ ವೇಳೆ ಹೋಗಿಲ್ಲ ಎಂದು ಟೀಕಿಸಿದ್ದರು. ಈ ಮಾತಿಗೆ ಸಿಡಿಮಿಡಿಗೊಂಡ ಡಿಕೆಶಿ, ಎಚ್ಡಿಗೆ ವಿರುದ್ಧ ವಿಧಾನಸೌಧದಲ್ಲಿ ವಾಗ್ದಾಳಿ ನಡೆಸಿದರು.