ಕೃಷಿ ಕಾನೂನು ತಿದ್ದುಪಡಿ : ಕೇಂದ್ರದ ಕರಡು ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಪ್ರತಿಭಟನಾಕಾರರು | Janata news
ನವದೆಹಲಿ : ಹೊಸ ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಕೇಂದ್ರ ಸರ್ಕಾರದ ಕರಡು ಪ್ರಸ್ತಾಪವನ್ನು ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ, ರೈತ ಸಂಘಗಳು ಬುಧವಾರ ಅದನ್ನು, ಅಸ್ಪಷ್ಟ, ಎಂದು ಕರಣ ನೀಡಿ ಪ್ರಸ್ತಾಪವನ್ನು ತಿರಸ್ಕರಿಸಿವೆ. ಅಲ್ಲದೇ, ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್, ಸಿಂಗು ಗಡಿಯಲ್ಲಿ (ದೆಹಲಿ-ಹರಿಯಾಣ ಗಡಿ) ಈ ಕುರಿತು ಹೇಳಿಕೆ ನೀಡಿದ್ದಾರೆ.
ಈ ಮೂರು ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಎಂಎಸ್ಪಿಗೆ ಭರವಸೆ ನೀಡಬೇಕು, ಎಂದು ನಾವು ಒತ್ತಾಯಿಸಿದ್ದೇವೆ. ಕರಡು ಪ್ರಸ್ತಾಪಗಳು ಅಸ್ಪಷ್ಟವಾಗಿವೆ. ನಾವು ಒಂದರ ನಂತರ ಒಂದು ರಸ್ತೆಯನ್ನು ನಿರ್ಬಂಧಿಸುತ್ತೇವೆ(ದೆಹಲಿಗೆ ಹೋಗುವ ರಸ್ತೆಗಳು), ಎಂದು ಪಂಜಾಬ್ ರೈತರ ಸಂಘಗಳ ಮುಖಂಡರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು.
ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನವು 14ನೇ ದಿನಕ್ಕೆ ಕಾಲಿಡುತ್ತಿದ್ದಂತೆ, ಕೇಂದ್ರವು ಇಂದು, ಲಿಖಿತ ಭರವಸೆಯನ್ನು, ನೀಡುವ ಮೂಲಕ ಪ್ರಸ್ತಾವ ಸಲ್ಲಿಸಿತ್ತು. 13 ಆಂದೋಲನ ಮಾಡುವ ರೈತ ಸಂಘಗಳಿಗೆ ಕಳುಹಿಸಲಾದ ಕರಡು ಪ್ರಸ್ತಾವನೆಯಲ್ಲಿ, ಎಎಮ್ಪಿಸಿಯನ್ನು ಬಲಪಡಿಸಲು ಎಲ್ಲಾ ಖಾಸಗಿ ಮಂಡಿಗಳ ನೋಂದಣಿಗೆ ಕೇಂದ್ರ ಭರವಸೆ ನೀಡಿದೆ.
ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಭೇಟಿಯು ಅಸ್ತವ್ಯಸ್ತತೆಯನ್ನು ಮುರಿಯಲು ವಿಫಲವಾದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಇಂದು ನಿಗದಿಯಾಗಿದ್ದ - ಪ್ರತಿಭಟನೆಗಳು ಪ್ರಾರಂಭವಾದ ಆರನೆಯ ಸಭೆಯಲ್ಲಿ ಕೃಷಿ ಮುಖಂಡರು ಹಾಜರಾಗಲು ನಿರಾಕರಿಸಿದ ನಂತರ ಅದನ್ನು ರದ್ದುಪಡಿಸಲಾಗಿದೆ.