ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳ ಮೇಲೆ ಕಲ್ಲು ತೂರಾಟ! | Janata news
ಬೆಂಗಳೂರು : ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂಬುದಾಗಿ ಪರಿಗಣಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ. ನೌಕರರು ಮಾಸ್ಕ್ ಧರಿಸಿಕೊಂಡು ಪ್ರತಿಭಟನೆಗೆ ಇಳಿದಿದ್ದಾರೆ.
ಬಸ್ಗಳ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ನೆಲಮಂಗಲ, ಕಲಬುರಗಿ, ಹೊಸಕೋಟೆ ಮೈಸೂರು ಸೇರಿದಂತೆ ವಿವಿ ಧೆಡೆ ಬೆಂಗಳೂರಿಗೆ ಬರುತ್ತಿದ್ದ ಬಸ್ಗಳ ಮೇಲೆ ಕಲ್ಲು ತೂರಿರುವುದರಿಂದ ಬಸ್ ಮುಂಭಾ ಗದ ಗಾಜು ಪುಡಿಪುಡಿಯಾಗಿದೆ.
ರಾಮನಗರದಲ್ಲಿ ಮೈಸೂರಿನಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಿ ಬಸ್ನ ಗಾಜು ಪುಡಿ ಮಾಡಲಾಗಿದೆ. ಚನ್ನಪಟ್ಟಣ ತಾಲ್ಲೂಕಿನ ಮುದುಗೆರೆ ಗ್ರಾಮದ ಬಳಿ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ಹೊಡೆಯಲಾಗಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ಮಾಡಿದ್ದು, ಕೆಲವು ಬಸ್ಗಳು ಜಖಂಗೊಂಡಿವೆ.
ಶಿವಮೊಗ್ಗದಲ್ಲೂ ಕೆ ಎಸ್ ಆರ್ ಟಿ ಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಲಬುರ್ಗಿಯಲ್ಲೂ ಕೆ ಎಸ್ ಆರ್ ಟಿ ಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾರಿಗೆ ಬಸ್ ಮೇಲೆ ದಿಢೀರ್ ಕಲ್ಲು ತೂರಾಟ ನಡೆಸಿದ್ದರಿಂದಾಗಿ, ಗ್ಲಾಸ್ ಹೊಡೆದು, ಚೂರು ಚಾಲಕನ ಕಣ್ಣಿಗೆ ತಗುಲಿ ಗಾಯವಾಗಿದೆ.
ಬೆಂಗಳೂರಿನಲ್ಲಿ ಯಶವಂತಪುರ ಟಿಟಿಎಂಸಿ, ಕೊಡಿಗೆಹಳ್ಳಿ, ಕೂಡ್ಲಿಗೇಟ್, ಕೊತ್ತನೂರು, ಸಿಂಗಸಂದ್ರ ಸೇರಿದಂತೆ 9 ಕಡೆ ಬಿಎಂಟಿಸಿ ಬಸ್ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದು ಬಸ್ಗಳ ಗಾಜುಗಳು ಒಡೆದಿದೆ.