ವಿಸ್ಟ್ರಾನ್ ಗಲಭೆ : ಎಸ್ಎಫ್ಐ ಮುಖಂಡನ ಬಂಧನ; ಕಾಂಗ್ರೆಸ್ ಮತ್ತು ಎಡಪಕ್ಷಗಳ ಹುನ್ನಾರ - ಬಿಜೆಪಿ ಆರೋಪ | Janata news
ಕೋಲಾರ : ಐಫೋನ್ ಉತ್ಪಾದನಾ ಕೇಂದ್ರ ಕೋಲಾರ್ನ ವಿಸ್ಟ್ರಾನ್ ಘಟಕದಲ್ಲಿ ಡಿಸೆಂಬರ್ 12 ರಂದು ನಡೆದ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಕೋಲಾರ್ ಪೊಲೀಸರು ಗುರುವಾರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ)ದೊಂದಿಗೆ ಸಂಯೋಜಿತವಾಗಿರುವ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ( ಎಸ್ಎಫ್ಐ)ದ ತಾಲ್ಲೂಕು ಅಧ್ಯಕ್ಷನನ್ನು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಕೋಲಾರ ಗ್ರಾಮೀಣ ಪೊಲೀಸರು ಶ್ರೀಕಾಂತ್ರನ್ನು ಬುಧವಾರ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ ಬಳಿಕ ಅವರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದೆ. ಶ್ರೀಕಾಂತ್ ವಾಟ್ಸಾಪ್ ಸಂದೇಶದ ಮೂಲಕ ಪ್ರತಿಭಟನೆಗೆ ಕರೆ ನೀಡಿದ್ದು, ಇದು ನೌಕರರಲ್ಲಿ ವ್ಯಾಪಕವಾಗಿ ಪ್ರಸಾರವಾಯಿತು, ಎಂದು ಆರೋಪಿಸಲಾಗಿದೆ.
ರಾಜ್ಯ ಬಿಜೆಪಿ ಕೋಲಾರದ ವಿಸ್ಟ್ರಾನ್ ಕಂಪನಿಗೆ ಬೆಂಕಿ ಪ್ರಕರಣದ ಕುರಿತು, ದೇಶದಲ್ಲಿ ಬಂಡವಾಳ ಹೂಡುತ್ತಿರುವ ವಿದೇಶಿ ಕಂಪನಿಗಳಿಗೆ ಭಾರತ ಸೂಕ್ತ ಜಾಗವಲ್ಲ ಎಂಬ ಮನಸ್ಥಿತಿಯನ್ನು ಬಿತ್ತಲು ಕಾಂಗ್ರೆಸ್ & ಎಡಪಕ್ಷಗಳು ಹುನ್ನಾರ ನಡೆಸುತ್ತಿವೆ. ಇದಕ್ಕೆ ಬಿಜೆಪಿ ಸರ್ಕಾರ ಆಸ್ಪದ ನೀಡುವುದಿಲ್ಲ, ಎಂದು ಟ್ವೀಟ್ ಮಾಡಿದ್ದು, ಕಾಂಗ್ರೆಸ್ & ಎಡಪಕ್ಷಗಳ ಮೇಲೆ ಗಂಭೀರ ಆರೋಪ ಮಾಡಿದೆ.
ಕೋಲಾರದ ವಿಸ್ಟ್ರಾನ್ ಕಂಪನಿಗೆ ಬೆಂಕಿ ಪ್ರಕರಣದಲ್ಲಿ ಎಸ್ಫ್ಐ ಸಂಘಟನೆಯ ಕೈವಾಡ ಇದ್ದು, ಅದರ ಮುಖಂಡರನ್ನು ಬಂಧಿಸಲಾಗಿದೆ.
— BJP Karnataka (@BJP4Karnataka) December 17, 2020
ದೇಶದಲ್ಲಿ ಬಂಡವಾಳ ಹೂಡುತ್ತಿರುವ ವಿದೇಶಿ ಕಂಪನಿಗಳಿಗೆ ಭಾರತ ಸೂಕ್ತ ಜಾಗವಲ್ಲ ಎಂಬ ಮನಸ್ಥಿತಿಯನ್ನು ಬಿತ್ತಲು ಕಾಂಗ್ರೆಸ್ & ಎಡಪಕ್ಷಗಳು ಹುನ್ನಾರ ನಡೆಸುತ್ತಿವೆ.
ಇದಕ್ಕೆ ಬಿಜೆಪಿ ಸರ್ಕಾರ ಆಸ್ಪದ ನೀಡುವುದಿಲ್ಲ. pic.twitter.com/tgd8vs1l6F
ಕೋಲಾರ್ ಗ್ರಾಮೀಣ ಪೊಲೀಸರು, ಶ್ರೀಕಾಂತ್ ಮತ್ತು ಹಲವಾರು ಎಸ್ಎಫ್ಐ ಕಾರ್ಯಕರ್ತರು ಡಿಸೆಂಬರ್ 12ರ ಬೆಳಿಗ್ಗೆ ವಿಸ್ಟ್ರಾನ್ ಆವರಣದೊಳಗೆ ಪ್ರವೇಶಿಸಿದ್ದಾರೆಂದು ಮತ್ತು ನಂತರ ಸಂಭವಿಸಿದ ವಿಧ್ವಂಸಕ ಕೃತ್ಯದಲ್ಲಿ ಅವರೂ ಸಹಭಾಗಿಯಾಗಿದ್ದರು, ಎಂದು ಆರೋಪಿಸಿದ್ದಾರೆ.
ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಮತ್ತು ಕಂಪನಿಯ ಉದ್ಯೋಗಿಗಳಲ್ಲದ ಹೊರಗಿನ ಜನರನ್ನು ಧ್ವಂಸಗೊಳಿಸಿದ ಸ್ಥಾವರಕ್ಕೆ ಕರೆತಂದಿದ್ದಕ್ಕಾಗಿ ಶ್ರೀಕಾಂತ್ನನ್ನು ಬಂಧಿಸಲಾಯಿತು, ಎಂದು ಮೂಲಗಳು ತಿಳಿಸಿದೆ.