ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿ ಕ್ಷೇತ್ರಕ್ಕೆ ಡಿಕೆಶಿ ಭೇಟಿ! | Janata news
ಹಾವೇರಿ : ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಭೇಟಿ ನೀಡಲಿದ್ದಾರೆ.
ಶುಕ್ರವಾರ ಬೆಳಗ್ಗೆ ಹೂವಿನಹಡಗಲಿ ಸಮೀಪದ ಸುಕ್ಷೇತ್ರ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಮೈಲಾರಲಿಂಗೇಶ್ವರ ಸ್ವಾಮಿಗೆವಿಶೇಷ ಪೂಜೆ ಸಲ್ಲಿಸಿದರು.
2018ರಲ್ಲಿ ಸುಕ್ಷೇತ್ರಕ್ಕೆ ಕಾಪ್ಟರ್ನಲ್ಲಿ ಬಂದಿದ್ದು, ದೇಗುಲದ ಸಂಪ್ರದಾಯಕ್ಕೆ ವಿರೋಧವಾಗಿತ್ತು. ರಾಜ್ಯದ ಮೂಲೆ ಮೂಲೆಯಿಂದ ಕಾಲ್ನಡಿಗೆಯಲ್ಲಿ ಮಾತ್ರ ಇಲ್ಲಿಗೆ ಭಕ್ತರು ಬರುತ್ತಾರೆ. ಆದರೆ ಹೊಸಪೇಟೆಯಿಂದ ಹೆಲಿಕಾಪ್ಟರ್ ಮೂಲಕ ನೇರವಾಗಿ ಕಾರ್ಣಿಕದ ಸ್ಥಳ ಡೆಂಕಣಮರಡಿಗೆ ಆಗಮಿಸಿ ಭಕ್ತರ ಚಿತ್ತಭಂಗ ಮಾಡಿದ್ದರು ಎನ್ನಲಾಗಿತ್ತು.
RELATED TOPICS:
English summary :DKShivakumar