ಭಿಕ್ಷುಕನನ್ನ ಗ್ರಾ.ಪಂ ಚುನಾವಣಾ ಕಣಕ್ಕಿಳಿಸಿದ ಗ್ರಾಮಸ್ಥರು! | Janata news
ಮೈಸೂರು : ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಮದ ಯುವಕರು ಯುವಕರೆಲ್ಲಾ ಸೇರಿ ಭಿಕ್ಷುಕರೊಬ್ಬರನ್ನು ಗ್ರಾಮ ಪಂಚಾಯ್ತಿ ಚುನಾವಣಾ ಅಖಾಡಕ್ಕಿಳಿಸಿದ್ದಾರೆ.
ಇದು ನಂಜನಗೂಡಿನ ಹುಳಿಮಾವು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿರುವ ಗ್ರಾಮವಾಗಿದ್ದು, ಬೊಕ್ಕಹಳ್ಳಿ ಗ್ರಾಮದ ನಿವಾಸಿ ಅಂಕನಾಯಕ ಎಂಬುವರಿಂದ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ. ಯುವಕರ ಈ ನಿರ್ಧಾರಕ್ಕೆ ದಿವಂಗತ ಡಾ.ವಿಷ್ಣುವರ್ಧನ್ ಅವರ ಸಿಂಹಾದ್ರಿಯ ಸಿಂಹ ಚಲನಚಿತ್ರ ಪ್ರೇರಣೆಯಾಗಿದೆ.
ವಿಶೇಷ ಚೇತನರಾಗಿದ್ದ ಆಂಕನಾಯಕ ಊರೂರು ತಿರುಗುತ್ತಾ, ಒಂದೊತ್ತಿನ ಊಟಕ್ಕೂ ಅಲೆಯುತ್ತಿದ್ದರು. ಗ್ರಾಮದ ಬಸ್ ನಿಲ್ದಾಣ ಮತ್ತು ಅಲ್ಲಲ್ಲಿ ವಾಸ ಮಾಡುತ್ತಾ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದರು.
ಕಳೆದ ಬಾರಿ ಆಯ್ಕೆಯಾದ ಗ್ರಾಮ ಪಂಚಾಯ್ತಿ ಸದಸ್ಯರು ಯಾವುದೇ ಕೆಲಸ ಮಾಡದ ಕಾರಣ ಈ ಬಾರಿ ಯುವಕರೆಲ್ಲಾ ಸೇರಿ ಅಂಕನಾಯಕರನ್ನ ಕರೆತಂದು ಚುನಾವಣೆಗೆ ನಿಲ್ಲಿಸಿದ್ದಾರೆ ಎನ್ನಲಾಗಿದೆ.