ಭ್ರಷ್ಟಾಚಾರ ಆರೋಪ, ರೈತ ಭವನದಲ್ಲಿ ಮಾಜಿ ಅಧ್ಯಕ್ಷರ ಆತ್ಮಹತ್ಯೆ ಹೈಡ್ರಾಮಾ | Janata news
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದ ರೈತ ಭವನ ಕಟ್ಟಡದ ಮೇಲೇರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಯತ್ನ ಮಾಡಿದ್ದಾನೆ. ಮಗ್ಗಲಮಕ್ಕಿ ಲಕ್ಷ್ಮಣಗೌಡ ಎಂಬಾತ ಆತ್ಮಹತ್ಯೆ ಯತ್ನ ಹೈಡ್ರಾಮಾ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಲಕ್ಷ್ಮಣಗೌಡ, ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಮಿತಿ ಮಾಜಿ ಅಧ್ಯಕ್ಷ. ತನ್ನ ಅಧಿಕಾರದ ಅವಧಿಯಲ್ಲಿ ಈತನ ಮೇಲೆ 30 ಲಕ್ಷ ಹಣ ದುರುಪಯೋಗ ಆರೋಪ ಕೇಳಿಬಂದಿತ್ತು.
ಹಾಲಿ ಆಡಳಿತ ಮಂಡಳಿಯಿಂದ ಮಾಜಿ ಅಧ್ಯಕ್ಷರ ಮೇಲೆ ಆರೋಪ ಮಾಡಲಾಗಿತ್ತು. ಆದರೆ, ನನಗೆ ಸಭೆಯಲ್ಲಿ ಮಾತನಾಡಲು ಅವಕಾಶ ಕೊಡುತ್ತಿಲ್ಲ, ನಾನು ಹಣ ದುರುಪಯೋಗ ಮಾಡಿಕೊಂಡಿಲ್ಲ ಎಂದು ಹಾಲಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕುತ್ತ ರೈತ ಭವನ ಕಟ್ಟಡದ ಮೇಲೆರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.
ಕಳೆದ ಒಂದು ಗಂಟೆಯಿಂದ ರೈತ ಭವನದ ಕಟ್ಟಡದಲ್ಲಿ ಆತ್ಮಹತ್ಯೆ ಹೈ ಡ್ರಾಮಾ ನಡೆಸಿದ್ದ ಲಕ್ಷ್ಮಣಗೌಡರ ಗಮನ ಬೇರೆಡೆ ಸೆಳೆದು, ಹಿಂದೆಯಿಂದ ಹೋಗಿ ಸದಸ್ಯರು ಹಿಡಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ಲಕ್ಷ್ಮಣಗೌಡ ನನ್ನನ್ನು ಎಲ್ಲರೂ ಸೇರಿ ಸಾಯಿಸೋಕೆ ಹೊರಟಿದ್ರಿ ಅಂತ ಆಕ್ರೋಶಗೊಂಡಿದ್ದಾರೆ.