ಬೇಟೆಗೆ ತೆರಳಿದ್ದ ವ್ಯಕ್ತಿ ಗುಂಡೇಟಿಗೆ ಬಲಿ: ಕೊಲೆ ಆರೋಪ | Janata news
ಮಡಿಕೇರಿ : ಬೇಟೆಯಾಡಲು ತೆರಳಿದ್ದಾಗ ವ್ಯಕ್ತಿಯೊಬ್ಬರಿಗೆ ಗೆ ಗುಂಡು ತಗುಲಿ ಸಾವಿಗೀಡಾಗಿರುವ ಘಟನೆ ಮಡಿಕೇರಿ ತಾಲ್ಲೂಕಿನ ಮದೆನಾಡುವಿನಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ಮದೆನಾಡು ನಿವಾಸಿ ಪರಮೇಶ್ವರ್ ಅಲಿಯಾಸ್ ಕೆ ಹೆಚ್ ಕಿರಣ್ (31) ಎಂದು ಗುರುತಿಸಲಾಗಿದೆ.
ಪರಮೇಶ್ವರ್ ಮತ್ತು ಅದೇ ಗ್ರಾಮದ ಬೆಳ್ಯಪ್ಪ ಎಂಬುವವರು ಬೇಟೆಯಾಡಲು ಕಾಡಿಗೆ ತೆರಳಿದ್ದರು ಎಂದು ಹೇಳಲಾಗಿದ್ದು, ಈ ವೇಳೆ ಗುಂಡೇಟು ತಗುಲಿ ಪರಮೇಶ್ವರ್ ಪ್ರಾಣ ಬಿಟ್ಟಿದ್ದಾನೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಮೃತ ಪರಮೇಶ್ವರ್ ಸಹೋದರ ಕೀರ್ತಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ ನನ್ನ ಸಹೋದರನನ್ನು ಬೆಳ್ಯಪ್ಪ ಬೇಟೆಗೆಂದು ಕರೆದೊಯ್ದು ಗುಂಡಿಕ್ಕಿ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಆದರೆ ಕಿರಣ್ ಅವರ ಸಹೋದರ ಕೆ ಹೆಚ್ ಕೀರ್ತಿ ಎಂಬುವವರು ತನ್ನ ಸಹೋದರನನ್ನು ಬೆಳ್ಳಿಯಪ್ಪ ಅವರು ಬೇಟೆಗೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತಿದ್ದಾರೆ.