ಲೇಹ್ ನ, ಫೈರ್ ಮತ್ತು ಫ್ಯೂರಿ ಕಾರ್ಪ್ಸ್ ಗೆ ಭೇಟಿ ನೀಡಿದ ಭೂಸೇನಾ ಮುಖ್ಯಸ್ಥ | Janata news
ಲೇಹ್ : ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ( ಎಲ್ಎಸಿ) ನಿರಂತರ ಉದ್ವಿಗ್ನತೆಯ ಮಧ್ಯೆ, ಭಾರತೀಯ ಭೂಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರು ಬುಧವಾರ ಲೇಹ್ ನಲ್ಲಿರುವ, ಫೈರ್ ಅಂಡ್ ಫ್ಯೂರಿ ಕಾರ್ಪ್ಸ್, ಗೆ ಒಂದು ದಿನದ ಭೇಟಿ ನೀಡಲು ಆಗಮಿಸಿದರು.
ಸೈನ್ಯದ ಮುಖ್ಯಸ್ಥರನ್ನು ಲೆಫ್ಟಿನೆಂಟ್ ಜನರಲ್ ಮೆನನ್ ಮತ್ತು ಇತರ ಸೇನಾಧಿಕಾರಿಗಳು ಲೇಹ್ನ ವಾಯುನೆಲೆಯಲ್ಲಿ ಸ್ವೀಕರಿಸಿದರು. ಅಕ್ಟೋಬರ್ನಲ್ಲಿ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಲೇಹ್ ಮೂಲದ 14 ಕಾರ್ಪ್ಸ್ ನ ಹೊಸ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡಿರುವುದು, ಇಲ್ಲಿ ಗಮನಿಸಬಹುದು.
ಪರಮಾಣು-ಶಕ್ತಿಯುತ ಭಾರತ ಹಾಗೂ ಚೀನಾ, ಮೇ ತಿಂಗಳಿನಿಂದಲೂ ನಿರಂತರ ದೀರ್ಘಕಾಲದ ಪೂರ್ವ ಲಡಾಕ್ನ ಎಲ್ಎಸಿ ಉದ್ದಕ್ಕೂ, ಉದ್ವಿಗ್ನತೆ ಅನುಭವಿಸಿದೆ. ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಪ್ರಯತ್ನದಲ್ಲಿ, ಎರಡೂ ದೇಶಗಳು ಹಲವಾರು ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳನ್ನು ನಡೆಸಿವೆ, ಆದರೆ ಚೀನಾದ ಇಬ್ಬಗೆ ನಿಲುವಿನಿಂದ ಈ ಸಭೆಗಳು ಇಲ್ಲಿಯವರೆಗೆ ಯಾವುದೇ ದೃಡವಾದ ಫಲಿತಾಂಶವನ್ನು ನೀಡಿಲ್ಲ.
ವಿಶೇಷವೆಂದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೊಂದಿಗೆ ಜುಲೈ2020 ತಿಂಗಳಲ್ಲಿ, ಲಡಾಖ್ ನ ಉದ್ವಿಘ್ನ ಪ್ರದೇಶದಲ್ಲಿರುವ ಫೈರ್ ಮತ್ತು ಫ್ಯೂರಿ ಕಾರ್ಪ್ಸ್ ಗೆ ಭೇಟಿ ನೀಡಿದ್ದರು, ಶತ್ರು ಪಾಳಯದ ವಿರುದ್ಧ ದೇಶದ ವಿರಯೋಧರ ಶೌರ್ಯವನ್ನು ಕೊಂಡಾಡುತ್ತಾ, ಅಲ್ಲಿನ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದರು.