ಕೆಲಸಕ್ಕೆ ಹೋಗುವಾಗ ವಿವಾಹಿತ ಮಹಿಳೆಯನ್ನು ಕೊಚ್ಚಿ ಕೊಲೆ! | Janata news
ಹಾಸನ : ವಿವಾಹಿತ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಚಿಕ್ಕಬೂವನಹಳ್ಳಿ ಬಳಿ ನಡೆದಿದೆ.
ಗಾಯತ್ರಿ (30) ಎಂಬಾಕೆಯನ್ನು ಮದುವೆಯಾಗುವಂತೆ ಮಂಜುನಾಥ್ ಒತ್ತಾಯಿಸುತ್ತಿದ್ದ. ಅದಾಗಲೆ ಮದುವೆಯಾಗಿ ಮಕ್ಕಳಿದ್ದ ಗಾಯತ್ರಿ, ವಿವಾಹಿತನೊಬ್ಬ ಮುಂದಿಟ್ಟ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದರು.
ಕೆಲ ವರ್ಷಗಳಿಂದ ಗಾಯತ್ರಿ ಹಾಗೂ ಮಂಜುನಾಥ್ ನಡುವೆ ಸ್ನೇಹ ಬೆಳೆದಿತ್ತು. ನಿನ್ನ ಮಕ್ಕಳನ್ನು ಬಿಟ್ಟು ಬಾ.. ನಾವಿಬ್ಬರೂ ಮದುವೆ ಆಗೋಣ ಎಂದು ಪೀಡಿಸುತ್ತಲೇ ಇದ್ದ. ಇದಕ್ಕೆ ಆಕೆ ಒಪ್ಪಿರಲಿಲ್ಲ. ಈ ನಡುವೆ ಗಾಯತ್ರಿ ಮತ್ತು ಮಂಜುನಾಥ್ ನಡುವೆ ಸಲಿಗೆ ಬೆಳೆದು ಅಕ್ರಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ.
ಇದಕ್ಕೊಪ್ಪ ವಿವಾಹಿತೆಯ ಮೇಲೆ ಸಿಟ್ಟಿಗೆದ್ದು, ಗಾಯತ್ರಿ ಕೆಲಸಕ್ಕೆ ಹೋಗುವಾಗ ಅಡ್ಡಗಟ್ಟಿದ ಆರೋಪಿ ಆಕೆಯನ್ನು ಕೊಚ್ಚಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.