ಗ್ರಾ.ಪಂ ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿ ಹೃದಯಾಘಾತದಿಂದ ಸಾವು! | Janata news
ಬೆಳಗಾವಿ : ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಹೃದಯಾಘಾತದಿಂದ ಅಸು ನೀಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನಡೆದಿದೆ.
ಟೀ ಕುಡಿಯುವ ವೇಳೆ ಚುನಾವಣಾ ಅಭ್ಯರ್ಥಿ ಮಾರುತಿಗೌಡ ಭೀಮಗೌಡ ಪಾಟೀಲ್(65) ಕೊನೆಯುಸಿರೆಳೆದಿದ್ದಾರೆ.
ಮಾರುತಿಗೌಡ ಭೀಮಗೌಡ ಪಾಟೀಲ್ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ನಿವಾಸಿ. ಮಾರುತಿಗೌಡ ಗ್ರಾಮದ ವಾರ್ಡ್ ನಂ. 3ರ ಚುನಾವಣಾ ಕಣದಲ್ಲಿದ್ದರು. ಡಿ. 27ರಂದು ಮತದಾನ ನಡೆಯಲಿದೆ. ಮಾರುತಿಗೌಡ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
English summary :Belagavi