ಅಲ್ಯುಮಿನಿಯಂ ಕೊಕ್ಕೆಯ ಮೂಲಕ ಅಡಿಕೆ ಕೊಯ್ಯುವ ಸಂದರ್ಭ ವಿದ್ಯುತ್ ತಗುಲಿ ಯುವಕ ಸಾವು! | Janata news
ಪುತ್ತೂರು : ಅಲುಮಿನಿಯಂ ಕೊಕ್ಕೆಯ ಸಹಾಯದಿಂದ ಅಡಿಕೆ ಮರದಿಂದ ಅಡಿಕೆ ಕೊಯ್ಯುವಾಗ ಅದು ವಿದ್ಯುತ್ ತಂತಿಗೆ ತಗುಲಿ ನವ ವಿವಾಹಿತರೊಬ್ಬರು ಮೃತ ಪಟ್ಟ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿ ನಡೆದಿದೆ.
ಮೃತರನ್ನು ಅಜ್ಜಿಕಲ್ಲು ನಿವಾಸಿ ಬಾಬು ಪೂಜಾರಿಯವರ ಪುತ್ರ ರವೀಂದ್ರ ಪೂಜಾರಿ (36) ಎಂದು ಗುರುತಿಸಲಾಗಿದ್ದು, ಮಂಗಳೂರಿನಲ್ಲಿ ಉದ್ಯಮಿ ಆಗಿರುವ ರವೀಂದ್ರ ಅವರು ಕ್ರಿಸ್ಮಸ್ ರಜೆಯ ನಿಮಿತ್ತ ಮನೆಗೆ ಆಗಮಿಸಿದ್ದರು.
ತಮ್ಮ ಮನೆಯ ಸುತ್ತಲಿನಲ್ಲಿರುವ ಅಡಕೆ ಮರದಿಂದ ಅಲ್ಯುಮೀನಿಯಂ ಕೊಕ್ಕೆಯಲ್ಲಿ ಅಡಕೆ ಕೀಳುತ್ತಿದ್ದ ಸಂದರ್ಭ ಪಕ್ಕದಲ್ಲಿದ್ದ ಎಚ್.ಟಿ ವಿದ್ಯುತ್ ತಂತಿಗೆ ಕೊಕ್ಕೆ ತಗುಲಿ ವಿದ್ಯುತ್ ಅಘಾತ ಉಂಟಾಗಿದ್ದು, ರವೀಂದ್ರ ಅವರು ವಿದ್ಯುತ್ ಅಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರು ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ..