ಹೋರಾಟದ ಬಗ್ಗೆ ಎಚ್ ವಿಶ್ವನಾಥ್ ಬಳಿ ಪಾಠ ಹೇಳಿಸಿಕೊಳ್ಳುತ್ತೇನೆ: ವಿಶ್ವನಾಥ್ಗೆ ಸಿದ್ದರಾಮಯ್ಯ ತಿರುಗೇಟು | Janata news
ಬೆಂಗಳೂರು : ಹೆಚ್.ವಿಶ್ವನಾಥ್ರನ್ನು ಕರೆಸಿಕೊಂಡು ಪಾಠ ಹೇಳಿಸಿಕೊಳ್ಳುವೆ. ಹೋರಾಟ ಮಾಡೋದು ಹೇಗೆಂದು ಪಾಠ ಹೇಳಿಸಿಕೊಳ್ಳುವೆ ಎಂದು ವಿಶ್ವನಾಥ್ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಯಾವುದೇ ಹೋರಾಟ ಮಾಡಿಯೇ ಇಲ್ಲ. ಅವರು ಕುರುಬ ಸಮಾಜವನ್ನು ಒಡೆದವರು ಎಂದು ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ನಾನು ಯಾವುದೇ ಹೋರಾಟ ಮಾಡಿಲ್ಲ. ಜನ ಸಿಎಂ ಮಾಡಿದರೂ ಅದೇ ಅಷ್ಟೇ. ಹೋರಾಟದ ಬಗ್ಗೆ ಎಚ್ ವಿಶ್ವನಾಥ್ ಬಳಿ ಪಾಠ ಹೇಳಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಸಿಎಂ ವಿರುದ್ಧ ಡಿನೋಟಿಫಿಕೇಷನ್ ಪ್ರಕರಣ ವಿಚಾರವಾಗಿ ನಾನು ಇನ್ನೂ ಕೋರ್ಟ್ ಆದೇಶದ ಪ್ರತಿ ನೋಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಕೋರ್ಟ್ ಆದೇಶದ ಪ್ರತಿ ನೋಡಿದ ಬಳಿಕ ಮಾತಾಡುವೆ. ದೇವರಜೀವನಹಳ್ಳಿ ಪ್ರಕರಣದಲ್ಲಿ ರಾಜೀನಾಮೆ ಕೇಳಿದ್ದೆವು. ಆದರೆ, ಸಿಎಂ ಯಡಿಯೂರಪ್ಪ ಭಂಡತನ ತೋರಿಸಿದ್ದರು. ಈಗಲೂ ಕೂಡ ಹಾಗೆಯೇ ಮಾಡುತ್ತಾರೆ ಅನಿಸುತ್ತೆ ಎಂದು ಹೇಳಿದರು.