ಬಂಡೀಪುರ ಅರಣ್ಯದಲ್ಲಿ ಜಿಂಕೆ ಬೇಟೆಮಾಡಿ ಅಡುಗೆ ಮಾಡುತ್ತಿದ್ದ ಆರು ಮಂದಿಯ ಬಂಧನ | Janata news
ಮೈಸೂರು : ಜಿಂಕೆಗಳನ್ನು ಅಕ್ರಮವಾಗಿ ಕೊಂದು ಅದರ ಅಡಿಗೆ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ನಂಜನಗೂಡು ತಾಲೂಕಿನ ನಾಗಣಪುರ ಗ್ರಾಮದಲ್ಲಿ ನಡೆದಿದೆ.
ಬಂಡೀಪುರದ ಓಂಕಾರ ವನ್ಯಜೀವಿ ವಲಯದ ನಾಗಣಾಪುರ ಬ್ಲಾಕ್ -2ರ ಕಲ್ಲರಕಿಂಡಿ ಎಂಬಲ್ಲಿ ಈ ಕೃತ್ಯ ನಡೆಸಲಾಗಿದೆ. ಸೋಮವಾರ ಪೇಟೆಯ ಚೌಡ್ಲು ಗ್ರಾಮದ ವಿದ್ಯಾಸಾಗರ್ (29), ಗೌಡಳ್ಳಿಯ ರವೀಂದ್ರ ಅಲಿಯಾಸ್ ಪೂವಯ್ಯ (41) ಬೆಟ್ಟದಳ್ಳಿಯ ಯಶೋಧರ (34) ತಲ್ತರೆಶೆಟ್ಟಳ್ಳಿಯ ವರಾದ ಪ್ರಸನ್ನ ಜಾನ್ (38) ಸುಜಿತ್ ಅಲಿಯಾಸ್ ತಿಮ್ಮಯ್ಯ (28) ಹಾಗೂ ಶಾಂತಳ್ಳಿಯ ಕುಶಾಲಪ್ಪ (47) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ನಂಜನಗೂಡಿನ ಮಹೇಶ್ (35) ಎಂಬಾತ ತಲೆಮರೆಸಿ ಕೊಂಡಿದ್ದಾನೆ.
ಆರೋಪಿಗಳು ಬಂಡೀಪುರ ಹುಲಿಧಾಮದ ಅರಣ್ಯ ಪ್ರದೇಶದಿಂದ ಬಂದೂಕಿನಿಂದ ಮೂರು ಜಿಂಕೆ ಹಾಗೂ ಒಂದು ಮೊಲವನ್ನು ಅಕ್ರಮವಾಗಿ ಕೊಂದು ತಂದು ಅಡುಗೆ ಮಾಡುತ್ತಿದ್ದ ಸಂದರ್ಭ ಇವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ.