ಹಾರ್ಲೆ ಡೇವಿಡ್ಸನ್ ಬೈಕ್ ಬಳಸಿ ಲಕ್ಷಾಂತರ ರೂಪಾಯಿ ಕದ್ದ ಕಳ್ಳನ ಬಂಧನ! | Janata news
ಬೆಳಗಾವಿ : ಹಾರ್ಲೇ ಡೆವಿಡಸನ್ ಬೈಕ್ ಬಳಸಿ ಸೊಸೈಟಿಗೆ ಕನ್ನ ಹಾಕಿದ್ದ ಕಳ್ಳನ ಬಂಧಿಸಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ವಶಪಡಿಸಿಕೊಂಡ ಮಾಳಮಾರುತಿ ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸುಭಾಷ ನಗರದ ಮುಜಫರ್ ಮಹಮ್ಮದ್ ಶೇಖ ಎಂಬಾತನನ್ನು ಬಂಧಿಸಲಾಗಿದೆ. 15ಲಕ್ಷ ರೂ. ಮೌಲ್ಯದ 301 ಗ್ರಾಂ. ಚಿನ್ನಾಭರಣ, ಒಂದು ಲಕ್ಷ ರೂ. ನಗದು ಹಣ ಹಾಗೂ 6.50 ಲಕ್ಷ ರೂ. ಮೌಲ್ಯದ ಹಾರ್ಲೆ ಡೇವಿಡಸನ್ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 22 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಸೆಂಬರ್ 30 ಹಾಗೂ 31-2020 ರಂದು 10:15 ಗಂಟೆಯ ನಡುವಿನ ಅವಧಿಯಲ್ಲಿ ನಗರದ ಮಹಾಂತೇಶ ನಗರದಲ್ಲಿರುವ ಕಿತ್ತೂರ ರಾಣಿ ಚನ್ನಮ್ಮಾ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್ ಮುಂದಿನ ಬಾಗಿಲಿನ ಕೀಲಿಕೊಂಡಿಯನ್ನು ಮುರಿದು ಒಳಗೆ ಹೋಗಿ ಅಲ್ಲಿ ಇಟ್ಟಿದ್ದ ಟ್ರೆಜರಿಯನ್ನು ಹಿಂದಿನಿಂದ ಕಟ್ ಮಾಡಿ ಅದರಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದನು.
ಡಿಸಿಪಿ ವಿಕ್ರಂ ಆಮಟೆ ಹಾಗೂ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ಇವರ ಮಾರ್ಗದರ್ಶನದಲ್ಲಿ ಮಾಳಮಾರುತಿ ಪಿಐ ಸುನೀಲ.ಬಿ.ಪಾಟೀಲ ಇವರ ನೇತೃತ್ವದಲ್ಲಿ ಆರೋಪಿಯನ್ನು ಸೆರೆಹಿಡಿದು ಹಿಡಿದಿದ್ದಾರೆ.