ಪಂಕ್ಚರ್ ಆಗಿರುವ ಬಸ್ ಗೆ ಸಿದ್ದರಾಮಯ್ಯ ಡ್ರೈವರ್, ಡಿಕೆಶಿ ಕಂಡಕ್ಟರ್ : ಬೊಮ್ಮಾಯಿ ವ್ಯಂಗ್ಯ | Janata news
ಹಾವೇರಿ : ನಾಲ್ಕು ಚಕ್ರ ಪಂಕ್ಚರ್ ಆಗಿರುವ ಬಸ್ಗೆ ಸಿದ್ದರಾಮಯ್ಯ ಅವರು ಡ್ರೈವರ್ ಮತ್ತು ಡಿ.ಕೆ. ಶಿವಕುಮಾರ್ ಕಂಡಕ್ಟರ್ ಆಗಿದ್ದಾರೆ. ಈ ಬಸ್ ನಿಂತಲ್ಲೆ ನಿಂತಿರುತ್ತದೆಯೇ ಹೊರತು ಮುಂದಕ್ಕೆ ಚಲಿಸುವುದಿಲ್ಲ. ಏಕೆಂದರೆ ಇಬ್ಬರ ನಡುವೆ ತಾಳಮೇಳ ಸರಿಯಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಹಾವೇರಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ನಾಲ್ಕು ಚಕ್ರ ಪಂಕ್ಚರ್ ಆಗಿರುವ ಬಸ್ ಗೆ ಸಿದ್ದರಾಮಯ್ಯ ಡ್ರೈವರ್, ಡಿಕೆಶಿ ಕಂಡಕ್ಟರ್ , ಬಸ್ ನಿಂತಲ್ಲೇ ನಿಲ್ಲುತ್ತದೆ, ಮುಂದಕ್ಕೆ ಚಲಿಸುವುದಿಲ್ಲ , ಏಕೆಂದರೆ ಇಬ್ಬರ ನಡುವೆ ತಾಳಮೇಳ ಸರಿಯಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ಐದು ಕಾಯ್ದೆಗಳು ಅಸಂಖ್ಯಾತ ಸುಳ್ಳುಗಳು ಎಂಬ ಕಿರುಹೊತ್ತಿಗೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡುವ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕೃಷಿ ಕಾಯ್ದೆಗಳು ಅನ್ನದಾತರ ಪರವಾಗಿವೆ ಎಂದು ತಿದ್ದುಪಡಿಯನ್ನು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಶ್ರೀಮಂತರ ಪರ, ಸೋತಾಗ ಜನಸಾಮಾನ್ಯ ಪರ ಮಾತನಾಡುತ್ತಾರೆ, ಆದ್ದರಿಂದ ಜನರು ಅವರನ್ನು ವಿರೋಧ ಪಕ್ಷದ ಸ್ಥಾನದಲ್ಲ ಕೂರಿಸಿದ್ದಾರೆ ಎಂದು ಟೀಕಿಸಿದ್ದಾರೆ.