ಬೆಂಗಳೂರಲ್ಲಿ ನಮ್ಮದೇನೈತ್ರಿ ಕೆಲಸ: ಯತ್ನಾಳ್ ಬೇಸರ | Janata news
ವಿಜಯಪುರ: : ರಾಜ್ಯ ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಮ್ಮ ಅಸಮಾಧಾನವನ್ನು ಮತ್ತೆ ಹೊರಹಾಕಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತಂತೆ ನಿಮಗೆ ಬೆಂಗಳೂರಿಗೆ ಬರಲು ಕರೆ ಬಂದಿಲ್ಲವಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ಬೆಂಗಳೂರಲ್ಲಿ ನಮ್ಮದೇನೈತ್ರಿ ಕೆಲಸ, ನಮ್ಮ ಕರೆನ್ಸಿ ಖಾಲಿ ಆಗಿದೆ ಎಂದು ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಅಲ್ಲದೇ ತಮ್ಮ ಮೊಬೈಲ್ ಕರೆನ್ಸಿ ಖಾಲಿಯಾಗಿರುವುದರಿಂದ ತಮಗೆ ಯಾರ ಕರೆಯೂ ಬಂದಿಲ್ಲ ಎಂದು ವ್ಯಂಗ್ಯವಾಡಿದರು.
English summary :Yatnal