ಗಾಜನೂರು ಡ್ಯಾಂನಲ್ಲಿ ಸೆಲ್ಫೀ ತೆಗೆಯವಾಗ ಜಾರಿ ಬಿದ್ದು ಯುವಕ ನೀರುಪಾಲು | Janata news
ಶಿವಮೊಗ್ಗ : ಸೆಲ್ಫಿ ತೆಗೆದುಕೊಳ್ಳುವಾಗ ಆಯ ತಪ್ಪಿ ನದಿಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಗಾಜನೂರು ಜಲಾಶಯದ ಬಳಿ ನಡೆದಿದೆ.
ಶಿವಮೊಗ್ಗದ ಜಿಲ್ಲೆಯ ಗಾಜನೂರು ಡ್ಯಾಂಗೆ ಕುಟುಂಬ ಮತ್ತು ಕುಟುಂಬಸ್ಥರ ಸ್ನೇಹಿತರ ಜೊತೆ ಬಂದಿದ್ದ ವಿನಾಯಕ ಎಂಬ 22 ವರ್ಷದ ಯುವಕ, ಗಾಜನೂರಿನ ಪಂಪ್ ಹೌಸ್ ಬಳಿ ನಿಂತು ಫೋನ್ ನಲ್ಲಿ ಸೆಲ್ಫಿ ತೆಗೆಯುವ ವೇಳೆ ಆಯ ತಪ್ಪಿ ತುಂಗಾ ನದಿ ನೀರಿಗೆ ಬಿದ್ದಿದ್ದಾನೆ.
ಮೃತ ಯುವಕ ವಿನಾಯಕನು ಶಿವಮೊಗ್ಗ ನಗರದ ಸವಳಂಗ ರಸ್ತೆಯ ನಿವಾಸಿ ಸುಕುಮಾರ್ ಅವರ ಪುತ್ರನಾಗಿದ್ದಾನೆ. ಅಗ್ನಿಶಾಮಕ ದಳ ಸಿಬ್ಬಂದಿ ಯುವಕನ ಶವವನ್ನು ಮೇಲಕ್ಕೆ ಎತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
RELATED TOPICS:
English summary :Shivamogga