ಮಕರ ಸಂಕ್ರಾಂತಿ: ತಮ್ಮ ನಿವಾಸದಲ್ಲಿ ಗೋಪೂಜೆ ನೆರವೇರಿಸಿದ ಸಿಎಂ ಬಿಎಸ್ವೈ | Janata news
ಬೆಂಗಳೂರು : ಸಂಕ್ರಾಂತಿ ದಿನ ಗೋಮಾತೆ ಹಸುಗಳು ಮತ್ತು ಎತ್ತುಗಳನ್ನು ವಿಶೇಷವಾಗಿ ಪೂಜೆ ಮಾಡುವ ಸಂಪ್ರದಾಯ ಹಳ್ಳಿಗಳಲ್ಲಿದೆ.
ಮಕರ ಸಂಕ್ರಾಂತಿಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ತಮ್ಮ ನಿವಾಸ ಕಾವೇರಿಯಲ್ಲಿ ಗೋಪೂಜೆ ನೆರವೇರಿಸಿದರು. ಈ ವೇಳೆ ಡಿಸಿಎಂ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್ ಉಪಸ್ಥಿತರಿದ್ದರು.
ರಾಜ್ಯದ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿರುವ ಸಿಎಂ, ನಮ್ಮ ಧರ್ಮ, ಸಂಸ್ಕೃತಿ, ಆಚರಣೆಗಳಲ್ಲಿ ಗೋವಿಗೆ ವಿಶೇಷ ಮಹತ್ವ, ತಾಯಿಯಂತೆ ಪೂಜನೀಯ ಸ್ಥಾನ ನೀಡಲಾಗಿದೆ. ದೇವರೇ ಗೋವುಗಳನ್ನು ಕಾಯ್ದ ನಂಬಿಕೆ, ಪರಂಪರೆಗಳು ಗೋವಿನೊಂದಿಗೆ ನಮ್ಮ ಅವಿನಾಭಾವ ಸಂಬಂಧಗಳ ನಿದರ್ಶನ. ಮಕರ ಸಂಕ್ರಾಂತಿಯ ಪವಿತ್ರ ಸಂದರ್ಭದಲ್ಲಿ ಇಂದು ಅಧಿಕೃತ ನಿವಾಸ ಕಾವೇರಿಯಲ್ಲಿ, ಎಂದಿನಂತೆ ಗೋಪೂಜೆ ನೆರವೇರಿಸಲಾಯಿತು ಎಂದು ಬರೆದುಕೊಂಡಿದ್ದಾರೆ.
ನಮ್ಮ ಧರ್ಮ, ಸಂಸ್ಕೃತಿ, ಆಚರಣೆಗಳಲ್ಲಿ ಗೋವಿಗೆ ವಿಶೇಷ ಮಹತ್ವ, ತಾಯಿಯಂತೆ ಪೂಜನೀಯ ಸ್ಥಾನ ನೀಡಲಾಗಿದೆ. ದೇವರೇ ಗೋವುಗಳನ್ನು ಕಾಯ್ದ ನಂಬಿಕೆ, ಪರಂಪರೆಗಳು ಗೋವಿನೊಂದಿಗೆ ನಮ್ಮ ಅವಿನಾಭಾವ ಸಂಬಂಧಗಳ ನಿದರ್ಶನ. ಮಕರ ಸಂಕ್ರಾಂತಿಯ ಪವಿತ್ರ ಸಂದರ್ಭದಲ್ಲಿ ಇಂದು ಅಧಿಕೃತ ನಿವಾಸ ಕಾವೇರಿಯಲ್ಲಿ, ಎಂದಿನಂತೆ ಗೋಪೂಜೆ ನೆರವೇರಿಸಲಾಯಿತು. pic.twitter.com/rnB2k8GcmQ
— B.S. Yediyurappa (@BSYBJP) January 14, 2021