ಸಲಿಂಗಕಾಮ ತೊರೆದು ಯುವತಿಯ ಹಿಂದೆ ಹೋದನೆಂಬ ಕಾರಣಕ್ಕೆ: ಬರ್ಬರವಾಗಿ ಕೊಂದು ರೈಲು ಹಳಿ ಮೇಲೆ ಹಾಕಿದ ಗೆಳೆಯರು ! | Janata news
ಬೆಂಗಳೂರು : ಯಶವಂತಪುರದ ಆರ್ಎಂಸಿ ಯಾರ್ಡ್ ನಿವಾಸಿ ಅಫ್ರೋಜ್ (34) ಕೊಲೆಯಾದವ. ಸಲಿಂಗಕಾಮ ತೊರೆದು ಯುವತಿಯ ಹಿಂದೆ ಹೋದನೆಂಬ ಕಾರಣಕ್ಕೆ ಅಫ್ರೋಜ್ನನ್ನು ಈತನ ಸ್ನೇಹಿತ ಸಿದ್ದಿಕಿಯೇ ಹತ್ಯೆ ಮಾಡಿದ್ದಾನೆ.
ಘಟನೆ ಸಬಂಧ ಮೂವರು ಆರೋಪಿಗಳನ್ನು ಬೆಂಗಳೂರು ನಗರ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಪಾದರಾಯನಪುರ ನಿವಾಸಿಗಳಾದ ಮಹಮ್ಮದ್ ಸಿದ್ಧಿಕ್ (26) ಮುಬಾರಕ್ ಪಾಶಾ (21) ಹಾಗೂ ಖಲೀಲ್ ಅಹಮದ್(23) ಬಂಧಿತರು.
ಜನವರಿ 6ರಂದು ಮೊಹಮ್ಮದ್ ಅಪ್ರೋಜ್ ಶವ ನಾಯಂಡಹಳ್ಳಿ-ಮೆಜೆಸ್ಟಿಕ್ ನಡುವಿನ ರೈಲ್ವೇ ಮಾರ್ಗದಲ್ಲಿ ಪತ್ತೆಯಾಗಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ಡೌಡಾಯಿಸಿ ಪರಿಶೀಲನೆ ನಡೆಸಿದ ಪೊಲೀಸರು ಅನುಮಾನಸ್ಪಾದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.
ಬಿಹಾರ ಮೂಲದ ಅಫ್ರೋಜ್, ಹಲವು ವರ್ಷಗಳಿಂದ ಯಶವಂತಪುರದ ಆರ್ಎಂಸಿ ಯಾರ್ಡ್ನಲ್ಲಿ ಹೋಟೆಲ್ ನಡೆಸುತ್ತಿದ್ದ. ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರಾಗಿ ಹೋಟೆಲ್ನಲ್ಲೇ ನೆಲೆಸಿದ್ದ. ಕೆಲ ವರ್ಷಗಳ ಹಿಂದೆ ಮಸೀದಿಯಲ್ಲಿ ಶಾಲೆಯ ಸ್ನೇಹಿತ ಸಿದ್ದಿಕಿ ಸಿಕ್ಕಿದ್ದ. ಇಬ್ಬರ ನಡುವೆ ಆತ್ಮೀಯತೆ ಮೂಡಿ ಸಲಿಂಗಕಾಮಕ್ಕೂ ತಿರುಗಿತ್ತು.
ಸಿದ್ದಿಕಿಗೆ ಹಣದಾಸೆ ತೋರಿಸಿ ಆತನ ಜತೆ ಅಫ್ರೋಜ್ ಲೈಂಗಿಕ ಕ್ರಿಯೆ ನಡೆಸುತ್ತಿದ್ದ.
ಅಫ್ರೋಜ್ಗೆ ಯುವತಿಯೊಬ್ಬಳ ಸ್ನೇಹ ಬೆಳೆದು ಆಕೆಯ ಜತೆ ಸಲುಗೆಯಿಂದ ಇರುತಿದ್ದ, ಇದರಿಂದ ಕೋಪಗೊಂಡ ಸಿದ್ದಿಕಿ, ತನ್ನ ಸ್ನೇಹಿತರ ಜತೆ ಸೇರಿ ಅಫ್ರೋಜ್ ಕೊಲೆಗೆ ಸಂಚು ರೂಪಿಸಿದ್ದ.
ಅದರಂತೆ ಸಿದ್ದಿಕಿ, ಅಫ್ರೋಜ್ಗೆ ಜ.2ರ ರಾತ್ರಿ ಹಂಪಿನಗರದ ಶ್ರೀ ಕೃಷ್ಣದೇವರಾಯ ರೈಲು ನಿಲ್ದಾಣ ಬಳಿಗೆ ಬರುವಂತೆ ಹೇಳಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಬಳಿಕ ರೈಲು ಹಳಿಗಳ ಮೇಲೆ ಶವ ಎಸೆದು ಪರಾರಿಯಾಗಿದ್ದರು. ರೈಲು ಹರಿದು ಮೃತದೇಹ ತುಂಡಾಗಿತ್ತು.
ಪೊಲೀಸರಿಗೆ ಅನುಮಾನ ಬಾರದಿರಲು ರೈಲ್ವೇ ಟ್ರ್ಯಾಕ್ನಲ್ಲಿ ಶವ ಬಿಸಾಡಿ ರೈಲು ಅಪಘಾತ ಎಂಬಂತೆ ಬಿಂಬಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ವ್ಯಕ್ತಿ ಸಾವಿಗೆ ಬಲವಂತ ಆಯುಧದಿಂದ ಹಲ್ಲೆಯಾಗಿದೆ ಎಂದು ವೈದ್ಯರು ವರದಿ ಸಲ್ಲಿಸಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರು, ಮೊಬೈಲ್ಗೆ ಬಂದಿದ್ದ ಕೊನೇ ಕರೆಯ ಬೆನ್ನತ್ತಿದ್ದಾಗ ಪಾದರಾಯನಪುರದ ಸಿದ್ದಿಕಿ ಸಿಕ್ಕಿಬಿದ್ದಿದ್ದಾನೆ.